ಧಾರವಾಡ prajakiran.com : ರಾಜ್ಯದಲ್ಲಿ ಹಿಂದಿ ದಿವಸ ಅಚರಣೆ ವಿರೋಧ ಹಿನ್ನೆಲೆಯಲ್ಲಿ ಕೇಂದ್ರದ ಕಲ್ಲಿದ್ದಲು ಮತ್ತು ಗಣಿ ಸಚಿವರು ಆಗಿರುವ ಧಾರವಾಡದ ಸಂಸದ
ಪ್ರಹ್ಲಾದ ಜೋಶಿ ಭಾವಚಿತ್ರವಿದ್ದ ಬ್ಯಾನರ್ ಗೆ ಧಾರವಾಡ ಜಿಲ್ಲೆಯ ಕರವೇ ಕಾರ್ಯಕರ್ತರು ಕಪ್ಪು ಮಸಿ ಎರಚಿದ ಘಟನೆ ಮಂಗಳವಾರ ನಡೆದಿದೆ.
ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಚೇರಿ ಎದುರಿನ ಬ್ಯಾನರ್ನಲ್ಲಿನ ಭಾವಚಿತ್ರಕ್ಕೆ ಕರವೇ ಶಿವರಾಮೆಗೌಡ ಬಣದ ಜಿಲ್ಲಾಧ್ಯಕ್ಷ ಪರಮೇಶ ಕಾಳೆ ಹಾಗೂ ತುಳಜಪ್ಪ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಹಿಂದಿ ಪ್ರಚಾರ ಸಭಾದ ಬ್ಯಾನರ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾವಚಿತ್ರ ಇರುವ ಹಿಂದಿ ದಿವಸದ ಬ್ಯಾನರ್ ಇದಾಗಿತ್ತು.
ಹಿಂದಿ ದಿವಸ ಆಚರಣೆ ಕುರಿತ ಬ್ಯಾನರ್ ಅಳವಡಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.