*ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ*
*ಧಾರವಾಡ 71- ಕ್ಷೇತ್ರ ಜಿಪಿಎ ಹೋಲ್ಡರ್ ಕೈಯಲ್ಲಿದೆ ಎಂದು ವ್ಯಂಗ್ಯ ವಾಡಿದ ಮಾಜಿ ಶಾಸಕ*
*ಹಾಲಿ ಶಾಸಕರ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವರ ವಿರುದ್ಧ ವಾಗ್ದಾಳಿ*
ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡದ
ಕಲಾಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬಿಜೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಅಮೃತ ದೇಸಾಯಿ, ನಮ್ಮ ಕ್ಷೇತ್ರ
ಧಾರವಾಡ 71- ಅಂತು ಜಿಪಿಎ ಹೋಲ್ಡರ್ ಕೈಯಲ್ಲಿದೆ
ಎಂದು ವ್ಯಂಗ್ಯ ವಾಡಿದರು.
ಹಾಲಿ ಶಾಸಕರ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
* ಕೆಲವು ಕಡೆ ಮುಂಗಾರು ಬಿತ್ತನೆ ಆಗಿದ್ದು ಈಗ ಮಳೆ ಇಲ್ಲದೆ ಬೆಳೆ ಒಣಗುವ ಸ್ಥಿತಿಗೆ ಬಂದಿರುತ್ತದೆ. ಹೀಗಾಗಿ ಧಾರವಾಡ ತಾಲೂಕು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ ರೂ: 20, ಸಾವಿರ/- ಪರಿಹಾರ ಹಣ ಮಂಜೂರ ಮಾಡಬೇಕು.
* ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದ್ದು ಅನಧಿಕೃತ ಲೋಡ್ಶೆಡ್ಡಿಂಗ್ನಿಂದ ಜಮೀನಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ.
ವಿದ್ಯುತ್ ಬಿಲ್ಲು ಏರಿಕೆಯಾಗಿದ್ದು ಇದರಿಂದ ಗ್ರಾಮಗಳ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಏರಿಕೆಯಾದ ವಿದ್ಯುತ್ ದರವನ್ನು ಕಡಿಮೆ ಮಾಡಿ ಪುನಃ ಮೊದಲಿನಂತೆ ವಿದ್ಯುತ್ ಬಿಲ್ ಆಕರಣೆ ಮಾಡುವಂತಾಗಬೇಕು.
* ಕಿಸಾನ ಸಮ್ಮಾನ ಯೋಜನೆ ನಿಲ್ಲಿಸಿದ್ದು ಖೇದಕರ ಸಂಗತಿಯಾಗಿದೆ. ಅದನ್ನು ಪುನಃ ಪ್ರಾರಂಭಿಸಿ ರೈತರ ಖಾತೆಗಳಿಗೆ ವಾರ್ಷಿಕವಾಗಿ ರೂ: 4000 ಹಣ ಹಾಕಬೇಕು.
* ರೈತ ವಿದ್ಯಾ ನಿಧಿ ಈ ಹಿಂದಿನ ಸರ್ಕಾರ ಯೋಜನೆ ರೂಪಿಸಿ ರೈತರ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ಸ್ಥಾಲರಶಿಫ್ ನೀಡುತ್ತಿದ್ದರು.
ಆದರೆ ಇಂದಿನ ಸರ್ಕಾರ ಅದನ್ನು ನಿಲ್ಲಿಸಿದ್ದು ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಯೋಜನೆಯನ್ನು ಪುನಾರಾರಂಭಿಸಬೇಕು.
ರೈತರಿಗೆ ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎ.ಪಿ.ಎಂ.ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರಿಂದ ನಿಗದಿತ ಬೆಲೆ ಸಿಗುತ್ತಿಲ್ಲ.
ಆದ್ದರಿಂದ ಮುಕ್ತ ಮಾರುಕಟ್ಟೆಯಿಂದ ರೈತ ಬೇರೆ ಎ.ಪಿ.ಎಂ.ಸಿ ಗಳಿಗೆ ಹೋಗಿ ಮಾರಾಟ ಮಾಡಬಹುದು ಆದ್ದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವ ತಿದ್ದುಪಡಿಯಾದ ಎ.ಪಿ.ಎಂ.ಸಿ ಕಾಯ್ದೆಯನ್ನು ಮರಳಿ ತರಬೇಕು. *
* ಬೆಲೆ ಏರಿಕೆ, ಎಲ್ಲಾ ದಿನಸಿ ವಸ್ತುಗಳು ಮತ್ತು ಖಾದ್ಯತೈಲಗಳ ಬೆಲೆ ಗಗನಕ್ಕೆ ಹೋಗಿರುವುದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುತ್ತಾರೆ. ತಕ್ಷಣದಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು.
* ಇತ್ತೀಚಿನ ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮನೆಗಳು ಬಿದ್ದು ಅದರಲ್ಲಿರುವ ಜನಸಾಮಾನ್ಯರಿಗೆ ವಸತಿಗೆ ತೊಂದರೆಯಾಗಿರುತ್ತದೆ
ಪ್ರತಿ ಬಿದ್ದ ಮನೆಗೆ ಕೂಡಲೆ ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗೆ 5 ಲಕ್ಷ ರೂಪಾಯಿಗಳು ಮತ್ತು ಅಪೂರ್ಣ’ ಬಿದ್ದ ಮನೆಗೆ 3 ಲಕ್ಷ ರೂಪಾಯಿಗಳನ್ನು ಹಾಗೂ ಸ್ವಲ್ಪ ಪ್ರಮಾಣ ಹಾನಿಯದ 50 ಸಾವಿರ ರೂಪಾಯಿಗಳನ್ನು ತ್ವರಿತಗತಿಯಲ್ಲಿ ಹಣ ಮಂಜೂರ ಮನೆಗಳಿಗೆ ಮಾಡಬೇಕು.
* ಶಕ್ತಿ ಯೋಜನೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಬಸ್ಸುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಇಲ್ಲವೆಂದಾದರೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ.
*ಈ ಸರ್ಕಾರ ಪ್ರಾರಂಭಿಸಲು ಪ್ರಯತ್ನಪಡುತ್ತಿರುವ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ, ಐದಾರು ವರ್ಷಗಳ ಹಿಂದೆ ಕಲಿತು ನಿರುದ್ಯೋಗಿಯಾಗಿರುವ ಪದವಿ ಮುಗಿಸಿರುವಂತಹ, ಕೈಗಾರಿಕಾ ತರಬೇತಿ (ITI) ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಸಹ ಅನ್ವಯಿಸುವಂತಾಗಬೇಕು.
ರೈತಾಪಿ ವರ್ಗದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ. ಈ ಹಿಂದೆ ಅತಿ ಹೆಚ್ಚು ಮಳೆಗಾಲವಾದಾಗ ರೈತರ ಖಾತೆಗಳಿಗೆ ಶೀಘ್ರದಲ್ಲಿಯೇ ಹಣ ಹಾಕಿದ್ದು ಮತ್ತು ಮನೆ ಕಳೆದುಕೊಂಡವರಿಗೂ ಪರಿಹಾರ ಒದಗಿಸಿದೆ.
ಆದ್ದರಿಂದ ಈಗಿನ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ನಾವು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಅಂತಾ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು