ಧಾರವಾಡ : ವಿದ್ಯಾನಗರಿ ಧಾರವಾಡದ ಎಪಿಎಂಸಿ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿದ ಉಪನಗರ ಪೊಲೀಸರು 842 ಗ್ರಾo ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ನಾಗರಾಜ್ ಕೊಟ್ಟೂರ(30) ಎಂಬಾತನನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಧಾರವಾಡದಲ್ಲಿ ಮಾದಕ ವಸ್ತುಗಳ ಜಾಲ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಖೆಡ್ಡಾ ತೋಡಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅಭಿನಂದಿಸಿದ್ದಾರೆ.
ಎಸಿಪಿ ಪ್ರಶಾಂತ್ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ದಯಾನಂದ ಶೆಗುಣಿಸಿ, ಪಿಎಸ್ ಐ ಗಳಾದ ಸಚಿನ ದಾಸರೆಡ್ಡಿ, ಎಲ್ ಕೆ ಕೋಳಬಾಳ, ಯಲ್ಲಪ್ಪ ಮೇದಾರ, ಸಿಬ್ಬಂದಿಗಳಾದ ಮೆಹಬೂಬ್ ನದಾಫ್. ರವಿ ದೊಡ್ಡಮನಿ, ಭರತೇಶ್ ಜೀವಣ್ಣವರ್ ಹಾಗೂ ಇತರೆ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು