ಧಾರವಾಡ prajakiran.com : ಪ್ರತಿಷ್ಠಿತ ಕಂಪನಿಯೊಂದರ ಚೆಕ್ಗೆ ನಕಲಿ ಸಹಿ ಬಳಸಿ ಬ್ಯಾಂಕ್ನಿಂದ ಹಣ ಪಡೆಯಲೆತ್ನಿಸಿದ ಇಬ್ಬರು ವಂಚಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಭಾಗ ನಿವಾಸಿ ಯುವರಾಜ ಬಿರಾದಾರ ಮತ್ತು ಆತನ ಸಹಚರ ಬಲೆಗೆ ಬಿದ್ದ ವಂಚಕರು.
ಆರೋಪಿತರು ಇಲ್ಲಿನ ಎನ್.ಟಿ.ಟಿ.ಎಫ್ ಬಳಿಯ ಎಚ್.ಡಿ.ಎಫ್.ಸಿ. ಬ್ಯಾಂಕ್ ಶಾಖೆಯಲ್ಲಿ ನಿನ್ನೆ ಮಧ್ಯಾಹ್ನ ಬೆಹರಿಲಾಲ ಇಸ್ಪಾಟ್ ಪ್ರೈ.ಲಿ.ನ ಚೆಕ್ಗಳಿಗೆ ನಕಲಿ ಸಹಿ ಬಳಸಿ ಬ್ಯಾಂಕ್ನಿಂದ ೨.೫೦. ಕೋಟಿ ರೂಪಾಯಿ ಹಣ ಪಡೆಯಲು ಯತ್ನಿಸಿದ್ದರು.
ಈ ಸಂದರ್ಭದಲ್ಲಿ ಸಹಿ ಬಗ್ಗೆ ಸಂಶಯಗೊಂಡ ಬ್ಯಾಂಕ್ನ ವ್ಯವಸ್ಥಾಪಕ ವಿಶ್ವನಾಥ ಮಲ್ಲಿಕಾರ್ಜುನ ಶಿವಪೂಜಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ಸಹಿ ಮಾಡಿ ಹಣ ದೋಚಲು ಯತ್ನಿಸಿದ ವಿಷಯ ಗೊತ್ತಾಗಿ ವಂಚಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಂಚನೆ ಪ್ರಕರಣ ಬಯಲಾಗಿದೆ.
ಎಸಿಪಿ ಅನುಷಾ ಜಿ., ಸಿಪಿಐಗಳಾದ ಸಂಗಮೇಶ ದಿಡಿಗಿನಾಳ, ರಮೇಶ ಹೂಗಾರ, ಎಎಸ್ಐ ಆರ್.ಎಚ್.ನದಾಫ್, ವಿ.ಎಸ್.ಕುದರಿ, ಮೌನೇಶ ಚವ್ಹಾಣ, ಜಾಧವ. ಕುರಿ ಪ್ರಕತಣದಲ್ಲಿ ಕಾರ್ಯನಿರ್ವಹಿಸಿದ್ದರು.
ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.