ಧಾರವಾಡ prajakiran.com :
ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬೃಂದಾವನ ಸಿಟಿ ಮಾಲೀಕ ಅಪಹರಣ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ದೊರೆತಿದೆ.
ಅಳಿಯನಿಂದಲೇ ಮಾವ ಉದ್ಯಮಿ ಶ್ರೀನಿವಾಸ ನಾಯ್ಡು ಕಿಡ್ನಾಪ್ ಆಗಿದ್ದು ಬಯಲಿಗೆ ಬಂದಿದೆ.
ಅಳಿಯ ಪವನ ವಾಜಪೇಯಿ, ಅಪಹರಣದ ಪ್ರಮುಖ ಸೂತ್ರಧಾರ ಎನ್ನಲಾಗಿದೆ.ಹೀಗಾಗಿ ಅಳಿಯ ಪವನ ಸೇರಿ ಐವರ ಬಂಧನ ಮಾಡಲಾಗಿದೆ.
ನಿನ್ನೆ ಅಪಹರಣವಾಗಿದ್ದ ಶ್ರೀನಿವಾಸ ನಾಯ್ಡು ಜೊತೆಗೆ ಸೈಟ್ ನೋಡಲು ಹೋಗಿದ್ದ ಅಳಿಯ ಪವನನನ್ನು ಅಪಹರಿಸಿರಲಿಲ್ಲ.
ಹೀಗಾಗಿ ಪೊಲೀಸರಿಗೆ ಇವನ ಮೇಲೆ ಅನುಮಾನ ಬಂದಿತ್ತು.
ಅಲ್ಲದೆ, ಅಪಹರಣ ಮಾಡಿದ್ದ ದುಷ್ಕರ್ಮಿಗಳು ಪವನಗೆಚೆನೂ ಮಾಡಿರಲಿಲ್ಲ.
ಬಳಿಕ ಮನೆಗೆ ಬಂದು ಕಿಡ್ನಾಪ್ ಸ್ಟೋರಿ ಹೇಳಿದ್ದ ಅಳಿಯ ಪವನ
ಮೇಲೆ ಪೊಲೀಸರು ಸಂಶಯ ಬಂದಿತ್ತು.
ಪೊಲೀಸ್ ತನಿಖೆಯಲ್ಲಿ ಅಪಹರಣದ ಕಹಾನಿ ಬಿಚ್ಚಿಟ್ಟ ಪವನ.
ಪವನಗೆ ಕಿಡ್ನಾಪ್ ಮಾಡಲು ನಾಲ್ವರು ಸಾಥ್ ನೀಡಿದ್ದರು
ಆಸೀಫ್, ಸಮೀರ, ಮಂಜುನಾಥ, ಖಲೀಲ್ ಕಿಡ್ನಾಪ್ ಮಾಡಿದ್ದ ಆರೋಪಿಗಳಾಗಿದ್ದಾರೆ.ಹೀಗಾಗಿಐವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ತಯಾರಿ ನಡೆಸಿದ್ದಾರೆ.
ಈ ಕುರಿತು ಧಾರವಾಡದ
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.