ರಾಜ್ಯ

ಮದುವೆ ಫೋಟೊ ಕೊಡದ ಫೋಟೊಗ್ರ್ರಾಫರ್ ಗೆ 30 ಸಾವಿರ ದಂಡ

ಧಾರವಾಡ ಪ್ರಜಾಕಿರಣ.ಕಾಮ್ ಜು.19: ಧಾರವಾಡದ ಆಕಾಶವಾಣಿ ಹತ್ತಿರದ ಶೇಕ್ ಕಂಪೌಂಡ, ನಿವಾಸಿ ಶಹಬಾಜ ಹೆಬಸೂರ ತನ್ನ ಮದುವೆಗೆ ಫೋಟೊ ತೆಗೆಯಲು ಸತ್ತೂರ ಕೆ.ಎಚ್.ಬಿ. ಲೇಔಟ್‍ನಲ್ಲಿರುವ ರವಿ ದೊಡ್ಡಮನಿಯವರಿಗೆ ರೂ.25 ಸಾವಿರ ಗೆ ಗುತ್ತಿಗೆ ಕೊಟ್ಟಿದ್ದರು.

ಆ ಪೈಕಿ ದೂರುದಾರ ಎದುರುದಾರರಿಗೆ ರೂ.15 ಸಾವಿರ ಅಡವಾನ್ಸ್ ಕೊಟ್ಟಿದ್ದರು.

ಡಿಸೆಂಬರ್-2022 ರಲ್ಲಿ ನಡೆದ ಮದುವೆಯ ಪೋಟೊಗಳನ್ನು ಪೋಟೋಗ್ರಾಫರರವರು ತೆಗೆದಿದ್ದರು.

ಆದರೆ ಅವುಗಳ ಫೋಟೊಗಳನ್ನು ದೂರುದಾರರಿಗೆ ಕೊಟ್ಟಿರಲಿಲ್ಲ. ಈ ಬಗ್ಗೆ ಹಲವು ಬಾರಿ ವಿನಂತಿಸಿದರೂ ಫೋಟೊಗ್ರಾಫರ ಫೋಟೊ ಕೊಟ್ಟಿಲ್ಲವಾದ್ದರಿಂದ ಅವನು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾನೆ ಅಂತಾ ಹೇಳಿ ದೂರುದಾರ ಫೋಟೊಗ್ರಾಫರ್ ರವಿಯ ಮೇಲೆ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ. ಹಿರೇಮಠ ಅವರು ಡಿಸೆಂಬರ್ 2022ರಲ್ಲಿ ದೂರುದಾರನಿಂದ ರೂ.15 ಸಾವಿರ ಪಡೆದು, ಮದುವೆಯ ಸವಿನೆನಪಿಗಾಗಿ ಮದುವೆ ಸಮಾರಂಭದಲ್ಲಿ ತೆಗೆದ ಫೋಟೊಗಳನ್ನು ದೂರುದಾರರಿಗೆ ನೀಡದೆ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ದೂರುದಾರ ಸಂದಾಯ ಮಾಡಿದ ಅಡವಾನ್ಸ್ ಹಣ ರೂ.15 ಸಾವಿರ ಜೊತೆಗೆ ದೂರುದಾರ ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.5,000/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರ ಫೋಟೊಗ್ರಾಫರ್‍ಗೆ ಆದೇಶಿಸಿದೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *