ಬೆಂಗಳೂರು prajakiran.com : ಸ್ವಾತಂತ್ರ್ಯ ಹೋರಾಟಗಾರ , ಶತಾಯುಷಿ ಹೆಚ್ ಎಸ್ ದೊರೆಸ್ವಾಮಿ (104) ಹೃದಯಾಘಾತದಿಂದ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ಕೊರೋನಾ ಸೋಂಕುಗೂ ಒಳಗಾಗಿ, ಕೊರೋನಾ ಗೆದ್ದು ಗುಣಮುಖರಾಗಿದ್ದರು.
ಆದರೆ ಬೆಂಗಳೂರಿನ ಜಯದೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸುಮಾರು 1:30 ರ ಸಮಯದಲ್ಲಿ ನಿಧನರಾದರು.
ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿಯಿಂದ ಸ್ವಲ್ಪ ಆರೋಗ್ಯ ಹದಗೆಟ್ಟು ಇಂದು ಬೆಳಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು.
ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬಂದ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಹೆಚ್ ಎಸ್ ದೊರೆಸ್ವಾಮಿ 1918 ಎಪ್ರಿಲ್ 10ರಂದು ಹಾರೋಗೇರಿಯಲ್ಲಿ ಜನಸಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು.
‘ಪೌರವಾಣಿ’ ಪತ್ರಿಕೆಯ ಮೂಲಕ ಪತ್ರಕರ್ತ ರಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಇನ್ನೂ ಹೆಚ್ ಎಸ್ ದೊರೆಸ್ವಾಮಿ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ, ದೊರೆಸ್ವಾಮಿ ಅವರ ನಿಧನ ಸುದ್ದಿಯಿಂದ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.