ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಯೂ ಟರ್ನ್ ಹೊಡೆದಿದ್ದಾರೆ.
ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ತಾವು ನೀಡಿದ್ದ ದೂರನ್ನು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 5 ಕೋಟಿ ರೂಪಾಯಿಗೆ ಡೀಲ್ ನಡೆದಿದೆ ಎಂಬ ಆರೋಪಕ್ಕೆ ಬೇಸತ್ತು ದೂರನ್ನು ವಾಪಾಸ್ ಪಡೆಯುತ್ತಿದ್ದೇನೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ಈ ಬಗ್ಗೆ ಕುಮಾರ ಸ್ವಾಮಿ ಸ್ಪಷ್ಟನೆ ನೀಡಬೇಕು. ಯಾರು ಯಾರಿಗೆ ಬೇಡಿಕೆ ಇಟ್ಟಿದ್ದರು ಎಂಬುದು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ನಾನು ಸಂತ್ರಸ್ತೆಗೆ ನ್ಯಾಒದಗಿಸಬೇಕೆನ್ನುವ ಮಹತ್ವಾಂಕ್ಷೆಯಿಂದದೂರು ನೀಡಿದ್ದೆ. ಆದರೆ ಕುಮಾರಸ್ವಾಮಿ ಅವರು ನನ್ನ ಮೇಲೆಯೇ ಆರೋಪ ಮಾಡಿರುವುದು ನೋಡಿದರೆ, ಅವರು ಹೋರಾಟಗಾರರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ಇದರಿಂದಾಗಿ ನನ್ನನ್ನು ಜನರು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ದಿನಕ್ಕೆ 100 ರಿಂದ 150 ಕರೆಗಳು ಬರುತ್ತಿವೆ. ನಾನು ಮೊದಲು ಆರೋಪ ಮುಕ್ತನಾಗಬೇಕು. ಆ ಮೇಲೆ ಹೋರಾಟವನ್ನು ಮುಂದುವರಿಸುತ್ತೇನೆ.
ನಾನು ದೂರನ್ನು ನೀಡಿದ್ದೇನೆಯೇ ವಿನಃ ನಾನು ಯಾವುದೇ ಸಿಡಿಯನ್ನು ಬಿಡುಗಡೆ ಮಾಡಿಲ್ಲ ಎಂದು ವಿವರಿಸಿದರು.
ಆ ರಾಸಲೀಲೆ ಸಿಡಿಯಲ್ಲಿ ಯುವತಿಯ ಚಾರಿತ್ರ್ಯವಧೆ ನಡೆಯುತ್ತಿದೆ. ದೂರು ಕೊಟ್ಟವರನ್ನೇ ಆರೋಪಿಯನ್ನಾಗಿ ನೋಡಲಾಗುತ್ತಿದೆ.
ಸಂತ್ರಸ್ತೆ ಮತ್ತು ನನಗೆ ತಿರುಗುಬಾಣವಾಗಿದೆ. ನಾನು ಯಾರ ಮಾನಹಾನಿ ಯಾಗುವ ಕಾರ್ಯವನ್ನು ಮಾಡಿಲ್ಲ. ನಾನು ಕೂಡ ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ ಎಂದು ದಿನೇಶ ಹೇಳಿದರು.