ಧಾರವಾಡ prajakiran.com : ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಮೆಂಟ್ ನ ಲೆಫ್ಟಿನಂಟ್ ಆಗಿ ಧಾರವಾಡದ 23ರ ಕುವರ ಆಯ್ಕೆಯಾಗುವ ಮೂಲಕ ಎಲ್ಲರ ಗಮನಸೆಳೆದಿದ್ದು, ಆ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಧಾರವಾಡದ ವಿನೋದ ಕಾಪಶಿ, ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲ್ಯೂ ಆಗಿ ಹಾಗೂ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಮಾಡಿದ್ದ.
ವಿನೋದ್ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ
ಪಿಯುಸಿ ಹಾಗೂ ಬಿಎ ಪದವಿಯನ್ನು ಉಚಿತವಾಗಿ ಪಡೆದು, 2019 ರಲ್ಲಿ ಸಿಡಿಎಸ್ಇ ಪರೀಕ್ಷೆ ಬರೆದು ಪಾಸಾಗಿ ಇದೀಗ ಭಾರತೀಯ ಸೇನೆಯ ಏಟ್ ಗೋರ್ಖಾ ರೆಜಮೆಂಟ್ ಗೆ ಆಯ್ಕೆಯಾಗಿದ್ದಾನೆ. ಅಲ್ಲಿ ವಿನೋದ್ ಪ್ಲಟೂನ್ ಲೆಫ್ಟಿನಂಟ್ ಆಗಿ ನೇಮಕಗೊಂಡಿದ್ದಾರೆ.
ಈ ಕುರಿತು ಪ್ರಜಾಕಿರಣ.ಕಾಮ್ ಜೊತೆ ಮಾತನಾಡಿದ ವಿನೋದ್ ಕಾಪಶಿ ತಮಗೆ ಉಚಿತ ಶಿಕ್ಷಣ ನೀಡಿದ ಜನತಾ ಶಿಕ್ಷಣ ಸಮಿತಿಗೆ ಧನ್ಯವಾದ ಸಲ್ಲಿಸಿದರು.
ಅವರಿಗೆ ಧಾರವಾಡ ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ಅವರು ಸನ್ಮಾನಿಸಿ ಗೌರವಿಸಿದರು.