ಹುಬ್ಬಳ್ಳಿ prajakiran.com : ಶುಲ್ಕ ಪಾವತಿಸದಿದ್ದರೂ ವಿದ್ಯಾರ್ಥಿಗಳನ್ನು ಉತ್ತಿರ್ಣ ಮಾಡುತ್ತೇವೆ ಎಂಬ ಶಿಕ್ಷಣ ಸಚಿವ ಸುರೇಶ್ ಕುಮಾರ ತಮ್ಮ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಒತ್ತಾಯಿಸಿದೆ.
ಕೋವಿಡ್ ಸಂಕಷ್ಟದಿಂದ ಕಳೇದ 8 ತಿಂಗಳಿನಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ವರ್ಗದವರು ಅನುಭವಿಸಿರುವ ಕಷ್ಟ ಎಲ್ಲರಿಗೂ ಗೊತ್ತು.
ಕೋವಿಡ್ ಕಾರಣದಿಂದಾಗಿ ಶಾಲೆಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, 2019-20 ನೇ ಸಾಲಿನ ಶುಲ್ಕ ಪಾವತಿ 30% ಉಳಿದುಕೊಂಡಿದೆ.2020-21 ನೇ ಸಾಲಿನಲ್ಲಿ ಶಾಲೆಗಳು ಆರಂಭ ಆಗದಿದ್ದರಿಂದ ದಾಖಲಾತಿಗಳು ಸ್ಥಗಿತಗೊಂಡವು.
ಶಿಕ್ಷಣ ಸಚಿವರ ಗೊಂದಲಮಯ ಹೇಳಿಕೆಯಿಂದಾಗಿ ಕೇವಲ 5% ರಷ್ಟು ದಾಖಲಾತಿಗಳಾಗಿವೆ.
ಪ್ರತಿವರ್ಷ ಸರ್ಕಾರವೇ ಶಾಲಾ ಶುಲ್ಕ ನಿಗದಿಪಡಿಸಿದರಿಂದ ಶಾಲೆಯಲ್ಲಿ ಸ್ಥಿರ ನಿಧಿಯು ಸಹಿತ ಇರುವುದಿಲ್ಲ.
ಪ್ರಸ್ತುತ ದಿನಗಳಲ್ಲಿ ಶಾಲಾ ಕಟ್ಟಡ ಬಾಡಿಗೆ,ಶಾಲಾ ವಾಹನ ಕಂತು,ವಿಮೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವೇತನವನ್ನು ಪಾವತಿಸುವುದು ಕಷ್ಟಕರವಾಗಿದೆ.
ಆದ್ದರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿಕೆಯಿಂದ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಕ್ಕೆ ಸಿಲುಕಿವೆ.ಹೀಗಾಗಿ ಶುಲ್ಕ ಪಾವತಿ ಮಾಡದಿದ್ದರೂ ವಿದ್ಯಾರ್ಥಿಗಳನ್ನು ಉತ್ತಿರ್ಣ ಮಾಡುತ್ತೇವೆ ಎಂಬ ಹೇಳಿಕೆ ಮತ್ತು ಆದೇಶವನ್ನು ಹಿಂಪಡೆಯುವಂತೆ ಸಂಘ ಒತ್ತಾಯಿಸಿದೆ.