ಜಿಲ್ಲೆ

ಧಾರವಾಡದಲ್ಲಿ ಧರೆಗುರುಳಿದ ಮನೆ, ಮಳೆಯಲ್ಲೂ ಸಂತ್ರಸ್ತರ ಪರದಾಟ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಹೋಗಿದೆ.

ಭಾರೀ ಮಳೆಗೆ ಕಮಲಾಪುರದಲ್ಲಿ 40 ಕ್ಕೂ ಹೆಚ್ಚು ಮಣ್ಣಿನ ಮನೆಗಳು ಧರೆಗುರುಳಿವೆ. ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ. 

ಸಂತ್ರಸ್ತ ಕುಟುಂಬಸ್ಥರು  ಬೀದಿಗೆ ಬಂದಿದ್ದು,  ನಮಗೆ ಸೂಕ್ತ ಪರಿಹಾರ ನೀಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮನೆಗಳು ಬೀಳುವ ಸಮಯದಲ್ಲಿ ಕುಟುಂಬಸ್ಥರು ಮನೆಯಿಂದ ಆಚೆ ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಘಟನೆ ನಂತರ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಹೋಗಿದ್ದಾರೆ. ಆದ್ರೆ ಸಂತ್ರಸ್ತ ಕುಟುಂಬಸ್ತರು ಇರಲು ಜಾಗದ ವ್ಯವಸ್ಥೆ ಮಾಡಿಲ್ಲ.

ಹೀಗಾಗಿ ತಮ್ಮ ಮನೆಯ ಹಿತ್ತಲಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. 

ಬುಧವಾರ ಮುಂಜಾನೆಯಿಂದಲೇ ವರುಣನ ಆರ್ಭಟ ಮುಂದುವರೆದಿರುವುದರಿಂದ ಸಂತ್ರಸ್ತರು ಉಳಿದು ಕೊಳ್ಳಲು ಸಹ ಸ್ಥಳವಿಲ್ಲದೆ ಅಕ್ಷರಶಃ ಪರದಾಡುವಂತಾಗಿದೆ.

ಅವರು ಮಳೆಯಲ್ಲಿಯೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುವಂತಾಗಿದ್ದು, ಈಗಲಾದರೂ ಸಂಬಂಧಪಟ್ಟವರೂ ಕಣ್ತೆರೆದು ನೋಡ್ತಾರೆ ಇಲ್ಲವೇ ಎಂಬುದು ಕಾದುನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *