ಧಾರವಾಡ prajakiran.com : ಪವಿತ್ರ ಕುರಾನನಿಂದ 26 ಅಂಶಗಳನ್ನು ತೆಗೆದು ಹಾಕುವಂತೆ ಕೋರಿ ವಸೀಂ ರಿಜ್ವಿ ಸಲ್ಕಿಸಿದ ಅರ್ಜಿಯನ್ನು ಖಂಡಿಸಿ ನಗರದ ಅಂಜುಮನ್ ಸಂಸ್ಥೆಯ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕುರಾನನಲ್ಲಿನ ಕೆಲವು ಭಾಗಗಳನ್ನು ತೆಗೆದು ಹಾಕಬೇಕು ಎಂದು ಕೋರಿ ವಸೀಂ ರಿಜ್ವಿ ಸಲ್ಲಿಸಿರುವ ಅರ್ಜಿ ಮೂರ್ಖತನದಿಂದ ಕೂಡಿದೆ.
ಪವಿತ್ರ ಕುರಾನನ್ನು ಮುಸ್ಲಿಂಯೇತರರು ಕೂಡ ಗೌರವಿಸಿ, ಪೂಜಿಸುವರು.
ಆದರೆ, ಕೆಲವು ಅಂಶಗಳನ್ನು ತೆಗೆದು ಹಾಕಬೇಕು ಎಂಬ ಕೆಲಸವನ್ನು ಇಡೀ ಭಾರತದ ಮುಸ್ಲಿಂರು ಖಂಡಿಸುತ್ತೆವೆ.
ಮುಸ್ಲಿಂ ಬಾಂಧವರ ಭಾವನೆಗೆ ಧಕ್ಕೆ ತರುವ ಈ ಅರ್ಜಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು.
ಒಂದು ವೇಳೆ ಅರ್ಜಿ ಹಿಂದಕ್ಕೆ ಪಡೆಯದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಮನವಿಯಲ್ಲಿ ಒತ್ತಾಯಿಸಿದರು.
ಸಮಾಜದ ಮುಖಂಡ ಇಸ್ಮಾಯಿಲ್ ತಮಟಗಾರ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ನಜೀರ ಮನಿಯಾರ, ರಫೀಕ್ ಬಿಸ್ತಿ, ಹನೀಫ್ ಮುನವಳ್ಳಿ, ಶಕೀಲ ತಮಟಗಾರ, ಅಜೀಜ ದಾಸನಕೊಪ್ಪ, ಬಾಬಾ ಶೇಖಸನದಿ, ಮುಜಿಬ ಅಶ್ರಫ್, ಬಶೀರಖಾನ ಜಾಗೀರದಾರ, ಗೌಸ ಮಕಾನದಾರ, ಮೌಲಾ ದಾಸನಕೊಪ್ಪ ಮತ್ತಿತರರು ಮನವಿ ಸಲ್ಲಿಸಿದರು.