ರಾಜ್ಯ

ಧಾರವಾಡದ ಕಲಾಭವನ ವಿಷಯದಲ್ಲಿ ಮೇಯರ್ ಕುಂಟ ಕೋಣ, ಶಾಸಕ ಮೂಕ ಜಾಣ ಎಂದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ

ಧಾರವಾಡ prajakiran.com : ಇಲ್ಲಿನ ಕಲಾಭವನದ ವಿಷಯದಲ್ಲಿ ಮೇಯರ್ ಕುಂಟ ಕೋಣನಂತೆ ಮತ್ತು ಶಾಸಕರು‌ ಮೂಕ ಜಾಣನಂತೆ ಆಗಿದ್ದಾರೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ವ್ಯಂಗ್ಯವಾಡಿದರು.

ನಗರದಲ್ಲಿ  ಗುರುವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೀಕರಿಸಿದ ಕಲಾಭವನ ಸಾರ್ವಜನಿಕರಿಗೆ ಅನುಕೂಲ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಗೆ ಸರಕಾರ ನೀಡಿದ 100 ಕೋ.ರೂ. ಅನುದಾನದಲ್ಲಿ ಕಲಾಭವನವನ್ನು 5 ಕೋ.ರೂ. ವೆಚ್ಷದಲ್ಲಿ ನವೀಕರಣ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದ ಸಿ.ವಿ.ಚಂದ್ರಶೇಖರ  ಭ್ರಷ್ಟಾಚಾರದ ಫಲವಾಗಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು

ಕಲಾಭವನದಲ್ಲಿನ ಮೇಲ್ಛಾವಣಿ ಕುಸಿದು ಬೀಳುತ್ತಿದೆ. ಆಸನಗಳು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.

ಆದರೂ ಶಾಸಕರು ಮತ್ತು ಮೇಯರ್ ಚಕಾರ ಎತ್ತುತ್ತಿಲ್ಲ. ಕಲಾಭವನ ನಗರದಲ್ಲಿನ ಕಲಾವಿದರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿನ ಸಂಚಾರಕ್ಕೆ ಯೋಗ್ಯವಾಗದಷ್ಟು
ಹದಗೆಟ್ಟು ಹೋಗಿವೆ. ಅ.24 ರೊಳಗೆ ಗುಂಡಿ‌ ಮುಚ್ಚದಿದ್ದರೆ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಚಿಂಚೋರೆ ಎಚ್ಷರಿಕೆ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *