ಧಾರವಾಡ prajakiran.com : ಇಲ್ಲಿನ ಕಲಾಭವನದ ವಿಷಯದಲ್ಲಿ ಮೇಯರ್ ಕುಂಟ ಕೋಣನಂತೆ ಮತ್ತು ಶಾಸಕರು ಮೂಕ ಜಾಣನಂತೆ ಆಗಿದ್ದಾರೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ವ್ಯಂಗ್ಯವಾಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೀಕರಿಸಿದ ಕಲಾಭವನ ಸಾರ್ವಜನಿಕರಿಗೆ ಅನುಕೂಲ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಗೆ ಸರಕಾರ ನೀಡಿದ 100 ಕೋ.ರೂ. ಅನುದಾನದಲ್ಲಿ ಕಲಾಭವನವನ್ನು 5 ಕೋ.ರೂ. ವೆಚ್ಷದಲ್ಲಿ ನವೀಕರಣ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದ ಸಿ.ವಿ.ಚಂದ್ರಶೇಖರ ಭ್ರಷ್ಟಾಚಾರದ ಫಲವಾಗಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು
ಕಲಾಭವನದಲ್ಲಿನ ಮೇಲ್ಛಾವಣಿ ಕುಸಿದು ಬೀಳುತ್ತಿದೆ. ಆಸನಗಳು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಆದರೂ ಶಾಸಕರು ಮತ್ತು ಮೇಯರ್ ಚಕಾರ ಎತ್ತುತ್ತಿಲ್ಲ. ಕಲಾಭವನ ನಗರದಲ್ಲಿನ ಕಲಾವಿದರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿನ ಸಂಚಾರಕ್ಕೆ ಯೋಗ್ಯವಾಗದಷ್ಟು
ಹದಗೆಟ್ಟು ಹೋಗಿವೆ. ಅ.24 ರೊಳಗೆ ಗುಂಡಿ ಮುಚ್ಚದಿದ್ದರೆ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಚಿಂಚೋರೆ ಎಚ್ಷರಿಕೆ ನೀಡಿದರು.