ರಾಜ್ಯ

ಕೆಐಎಡಿಬಿ ಬಹುಕೋಟಿ ಹಗರಣ : ಸಿಐಡಿ ಬಲೆಗೆ ಬಿದ್ದ ಮತ್ತೋಬ್ಬ ಆರೋಪಿ

ಧಾರವಾಡ ಪ್ರಜಾಕಿರಣ.ಕಾಮ್  : ಕೆಐಎಡಿಬಿ ಬಹುಕೋಟಿ ಹಗರಣದ ತನಿಖೆ ಮುಂದುವರೆದಿದ್ದು, ಕಬ್ಬೇನೂರಿನ ನಾಗನಗೌಡ ಭರಮಗೌಡರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಇದೀಗ ಬಂಧಿತರ ಸಂಖ್ಯೆ
7ಕ್ಕೆ ಏರಿಕೆ ಆದಂತಾಗಿದೆ.

ನಾಗನಗೌಡ ಭರಮಗೌಡರ್‌ ಎಂಬಾತ ಮುರಳಿಧರ ಶ್ರೀನಿವಾಸ ಜಹಗೀರದಾರ ಎಂಬ ಭೂಮಿ ಕಳೆದುಕೊಂಡ ಮೂಲ ರೈತನ ಹೆಸರಿನಲ್ಲಿ
ಕೆಐಎಡಿಬಿ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಎರಡನೇ ಬಾರಿ ಪುನಃ ಖೊಟ್ಟಿ ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕ್ ಉಣಕಲ್‌ ಶಾಖೆಯಲ್ಲಿ ನಕಲಿ ಖಾತೆ ಮೂಲಕ
4ಕೋಟಿ 11ಲಕ್ಷ ಜಮೆ ಮಾಡಿಸಿ,ಹಣ ವರ್ಗಾವಣೆ ಮಾಡಿಕೊಂಡ ಪರಿಣಾಮ ಸಿಐಡಿ ಅಧಿಕಾರಿ ಎಲ್. ಆರ್. ಅಗ್ನಿಯವರ ಬಲೆಗೆ ಬಿದ್ದಿದ್ದಾರೆ.

ಭರಮಗೌಡರ್‌ನನ್ನು ಜೈಲಿಗಟ್ಟಿದ್ದಾರೆ.
ಈ ನಾಗನಗೌಡ ಭರಮಗೌಡರ್‌
ವೃದ್ಧಾಪ್ಯ ವೇತನ ಕೊಡಿಸೋದಾಗಿ ಹಣ ಪೀಕೋದರ ಜೊತೆಗೆ ವೈದ್ಯರೊಂದಿಗೆ ಮಿಲಾಪಿಯಾಗಿ 50ಕ್ಕೂ ಹೆಚ್ಚು ಸಧೃಢ ದೇಹದವರಿಗೆ “ವಿಕಲಾಂಗ” ಸರ್ಟೀಫಿಕೇಟ್‌”ನೀಡಿಸಿ ಅವರಿಗೆ ಹಣ ಬರುವಂತೆ ಮಾಡಿ ಪಾಲುದಾರನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *