*ಧಾರವಾಡದ ಗಡಿ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ*
*ತೇಗೂರ, ಹಳೆತೇಗೂರು, ಗುಳೇದಕೊಪ್ಪ,ಮದಿಕೊಪ್ಪದ ನಡುವೆ ಪ್ರತ್ಯಕ್ಷ*
*ಗ್ರಾಪಂನಿಂದ ಡಂಗುರ*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಗಡಿ ಗ್ರಾಮ ತೇಗೂರ, ಹಳೆ ತೇಗೂರ, ಗುಳೇದಕೊಪ್ಪ, ಮದಿಕೊಪ್ಪದ ನಡುವೆ ಮೂರು ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ.
ಹೀಗಾಗಿ ತೇಗೂರು, ಹಳೆತೇಗೂರು, ಗುಳೇದಕೊಪ್ಪ, ಮದಿಕೊಪ್ಪದ ಜನ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ಹಾಗೆಯೇ ಪಂಚಾಯಿತಿಯಿಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ.
ಗ್ರಾಮಸ್ಥರು ಹೊಲಗಳಿಗೆ ತೆರಳುವಾಗ ಹಾಗೂ ಮನೆಗೆ ಮರಳುವಾಗ ತಮ್ಮ ರಾಸುಗಳ ಬಗ್ಗೆ ಕೂಡ ನಿಗಾವಹಿಸಬೇಕು ಎಂದು ಕೋರಿದ್ದಾರೆ.
ಮಾಹಿತಿ ಅರಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇದರಿಂದಾಗಿ ಧಾರವಾಡ ಗ್ರಾಮೀಣ ಭಾಗದಲ್ಲಿ ಚಿರತೆ ಭೀತಿ ಎದುರಾಗಿದ್ದು,
ಜನ ಆತಂಕದಿಂದ ಜೀವನ ನಡೆಸುವಂತಾಗಿದೆ.
ಚಿರತೆ ಬಂದಿದ್ದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದು,
ಆದರೆ ಎಲ್ಲಿಯೂ ಈವರೆಗೂ ಚಿರತೆ
ಪತ್ತೆಯಾಗದ ಹಿನ್ನೆಲೆಯಲ್ಲಿ
ಬೆಳಗಾವಿ ಜಿಲ್ಲೆಯ ಅರಣ್ಯದತ್ತ ಹೋಗಿರೋ ಶಂಕೆ ವ್ಯಕ್ತಪಡಿಸಿದ್ದಾರೆ.
ಖಾನಾಪುರ ತಾಲೂಕಿನ ಅರಣ್ಯ ಭಾಗದಿಂದ ಚಿರತೆ ಬಂದು ಹೋಗಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ .