ರಾಜ್ಯ

ಧಾರವಾಡದಲ್ಲಿ ಜನನ-ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ವಿರೋಧ

ಧಾರವಾಡ prajakiran. com : ಕರ್ನಾಟಕ ಜನನ ಹಾಗೂ ಮರಣ ನೋಂದಣಿಗೆ ಸಂಬಂಧಿಸಿದ ನಿಯಮ-9 ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ಹೊರಡಿಸಿದ ಅಧಿಸೂಚನೆಯ್ನು ರದ್ದು ಪಡಿಸುವಂತೆ ಆಗ್ರಹಿಸಿ ಧಾರವಾಡ ವಕೀಲರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಲಾಯಿತು.

ಈಗಿರುವ ಕಾನೂನಿನಂತೆ ಎಲ್ಲ ಅಧಿಕಾರವು ಒಂದನೇ ದರ್ಜೆಯ ನ್ಯಾಯಾಧೀಶರಿಗೆ ಇತ್ತು. ಈಗ ಸರ್ಕಾರವು ಕೋರ್ಟಿನಿಂದ ಅಧಿಕಾರವನ್ನು ಕಿತ್ತುಕೊಂಡು ಉಪವಿಭಾಗಾಧಿಕಾರಿಗಳಿಗೆ ಹಸ್ತಾಂತರಿಸಲು ನಿಯಮ-9 ಕ್ಕೆ ತಿದ್ದುಪಡಿ ಮಾಡಲು ಹೊರಟಿದೆ.

ಇದು ಬಡ ಪಕ್ಷಗಾರರಿಗೆ ಅನ್ಯಾಯವನ್ನು ಮಾಡಿದ ಹಾಗೇ ಆಗುತ್ತದೆ ಹಾಗೂ ತ್ವರಿತ ಗತಿಯಲ್ಲಿ ಪಕ್ಷಗಾರರಿಗೆ ನ್ಯಾಯ ಸಿಗುವದಿಲ್ಲ.

ಪಕ್ಷಗಾರರು ಸಾಮಾಜಿಕ ತಳಹದಿಯ ಮೆರೆಗೆ ನ್ಯಾಯಾಲಯದಿಂದ ನ್ಯಾಯವನ್ನು ಪಡೆದುಕೊಳ್ಳಲು ಇಚ್ಚಿಸುವರು.

ಅನ್ಯಾಯಾಲಯದ ಆಜ್ಞೆಗಳು ಯಾವಾಗಲೂ ಸರ್ವ ಶ್ರೇಷ್ಠ ಹಾಗೂ ಪಕ್ಷಿಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ತಾನೂನಿನ ಅಡಿಯಲ್ಲಿ ಮಾಡಿದ ಆದೇಶಗಳು ಇರುವದರಿಂದ ಜನರ ಒಲವು ನ್ಯಾಯಾಲಯಗಳ ಆದೇಶಗಳ ಮೇಲೆ ವಿಶ್ವಾಸವನ್ನು ಇರಿಸುತ್ತವೆ ಹೊರತು ಬೇರೆ ಇಲಾಖೆಯ ಮುಖಾಂತರ ಮಾಡಿದ ಆದೇಶಗಳ ಮೇಲೆ ಇರುವದಿಲ್ಲ .

ಈಗಿನ ತಿದ್ದುಪಡಿ ಯಿಂದ ಪಕ್ಷಗಾರರ ಭಾವನೆಯನ್ನು ತೀರಿಸದೆ ಮತ್ತಷ್ಟು ಎಲ್ಲ ದಿಕ್ಕುಗಳಿಂದ ಸಂಕಷ್ಟಕ್ಕೆ ಬಿಳಿಸಿದಂತಾಗುತ್ತದೆ.

ಆದ್ದರಿಂದ ತಿದ್ದುಪಡಿಯ ನಿಯಮವನ್ನು ಹಿಂಪಡೆದು ಈಗಿನಂತೆ ಇರುವ ಜನನ ಮರಣ ವಿಷಯವಾಗಿ ಸಂಬಂಧಿಸಿರುವ ಎಲ್ಲ ಪ್ರಕರಣಗಳನ್ನು ನ್ಯಾಯಾಲಯಗಳಿಂದ ತೀರ್ಮಾನಿಸಲು ಕ್ರಮ ಕೈಗೊಳ್ಳಬೇಕೆಂದು ಸಂಘದವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಸಿ.ಎಸ್.‌ಪೊಲೀಸ ಪಾಟೀಲ, ಎನ್.ಆರ್..ಮಟ್ಟಿ, ಅಶೋಕ ದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *