ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ….!
ಧಾರವಾಡ prajakiran. com :
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಇತನ ಸೋದರತ್ತೆ ಮಗ ಸಂತೋಷನಿಗೆ ಮರು ವಿವಾಹ ಮಾಡಿಸಿದ ಆರೋಪ ಹಾಗೂ ಆತನ ಹೆಂಡತಿಯ ಮೇಲೆ ಹಲ್ಲೆ, ನಿಂದನೆ ಮತ್ತು ಮಾನಸಿಕ ಹಿಂಸೆ ನೀಡಿದ ಕುರಿತು ಧಾರವಾಡ ಗ್ರಾಮೀಣ ಮಹಿಳಾ ಪೊಲೀಸ್ ಠಾಣೆಗೆ ನೋಂದ ಮಹಿಳೆ ಮಂಜುಳಾ ದೂರು ನೀಡಿದ್ದಾರೆ.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಸೇರಿದಂತೆ ಒಟ್ಟು 16 ಜನರ ಮೇಲೆ ದೂರು ದಾಖಲಾಗಿದೆ.
ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಸಂತೋಷ ಸೊಟ್ಟಮ್ಮನವರ ಜೊತೆಗೆ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಮಂಜುಳಾ ಎಂಬುವರೆ ದೂರು ದಾಖಲು ಮಾಡಿದ್ದು. ಇದರಲ್ಲಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ ಐದನೇ ಆರೋಪಿಯಾಗಿದ್ದಾರೆ.
ಸಂತೋಷ @ ಕೆಂಚಪ್ಪ ಸೊಟ್ಡಮ್ಮನವರ ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಸೋದರತ್ತೆ ಮಗ ಎನ್ಬಲಾಗಿದೆ.
ಮಕ್ಕಳಾಗಿಲ್ಲ ಎಂದು ಮರು ಮದುವೆಯಾಗಲು ಸಹಕಾರ ನೀಡಿರುವ ಮುತ್ತಣ್ಣವರ ಇವಳಿಗೆ ಧಮ್ಕಿ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.