ಕೆ ಐ ಎ ಡಿ ಬಿ ಬಹುಕೋಟಿ ಹಗರಣ : ಸಿಐಡಿ ಖೆಡ್ಡಾಕ್ಕೆ ಬಿದ್ದ
ಶಂಕರ್ ತಳವಾರ
ಸಿಐಡಿ ಬಂಧನದ ಬೆನ್ನಲ್ಲೇ ಎದೆನೋವು ಹೇಳಿ ಆಸ್ಪತ್ರೆಗೆ ದಾಖಲಾದ “ಶಂಕರ”ನ ಆಟ ಬಲ್ಲವರಾರು….!
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜೂನ್ 30ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್
ವಿ.ಡಿ. ಸಜ್ಜನ ಆಂಡ್ ಟೀಂನ ಮೊದಲ ಕುಳ ಕೊನೆಗೂ ಸಿಐಡಿ ಬಲೆಗೆ
ಸಿಐಡಿ ಬಲೆಗೆ ಬೀಳಲಿದ್ದಾರಾ ಇನ್ನುಳಿದ ಕೆ ಐ ಎ ಡಿ ಬಿಯ ಭ್ರಷ್ಟ ಅಧಿಕಾರಿಗಳು
ಧಾರವಾಡ ಪ್ರಜಾಕಿರಣ.ಕಾಮ್ ಎಕ್ಸಕ್ಲೂಸಿವ್ : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮೊದಲ ಬಲೆಯನ್ನು ಕೆಡವುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹೌದು ಇದು ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ. ಸಿಐಡಿ ಅಧಿಕಾರಿಗಳು ಶುಕ್ರವಾರ ಧಾರವಾಡದ ಕೆ ಐ ಎ ಡಿ ಬಿ ಯ ಹಿರಿಯ ಸಹಾಯಕ ಶಂಕರ್ ತಳವಾರ ನನ್ನು ಬಲೆಗೆ ಕೆಡವಿದ್ದಾರೆ.
ಆತಂಕದ ಸಂಗತಿಯೆಂದರೆ ಇತನನ್ನು ಸಿ ಐ ಡಿ ಅಧಿಕಾರಿಗಳು ಅಧಿಕೃತ ವಾಗಿ ಬಂಧಿಸಿದ ಬೆನ್ನಲ್ಲೇ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಏದೆನೋವು ಇದೆ ಎಂದು ವೈದ್ಯರು ಹೇಳಿದ್ದಾರೆ.
ಹೀಗಾಗಿ ಸಿ ಐ ಡಿ ಅಧಿಕಾರಿಗಳು ವೈದ್ಯಕೀಯ ಚಿಕಿತ್ಸೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ನೀಡುತ್ತಿದ್ದಾರೆ ಎಂದು ಸಿ ಐ ಡಿ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.
ಫೆ. 23ರಂದು ಎಂ.ಕೆ. ಸಿಂಪಿ ಹಾಗೂ ಇತರರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.
ಅರ್ಜಿದಾರರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ವಾದಿಸಿದರು. ಅಲ್ಲದೆ, ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಮನ್ನಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದರು.
ಕಳೆದ ಹಲವು
ದಿನಗಳಿಂದ ಧಾರವಾಡದಲ್ಲಿಯೇ ಬಿಡಾರ ಹೂಡಿರುವ ಸಿ ಐ ಡಿ ಅಧಿಕಾರಿಗಳ ತಂಡ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಹಾಗೂ ಹಲವು ರೈತರು ಮತ್ತು ಐಡಿಬಿಐ ಬ್ಯಾಂಕ್, ಕೆವಿಜಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿ 14 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು.
ಇಪ್ಪತ್ತೈದು ಕೋಟಿ ಹಗರಣದ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ದಾಖಲೆ ಬಿಡುಗಡೆ ಮಾಡಿ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಲಿಖಿತ ದೂರು ನೀಡಿದ ನಂತರ ಎಚ್ಚೆತ್ತ ರಾಜ್ಯ ಸರಕಾರ ಪ್ರಕರಣ ದಾಖಲಿಸಿ ಸಿಐಡಿ ತನಿಖೆ ಗೆ ಹಸ್ತಾಂತರ ಮಾಡಿತ್ತು.
ಜೊತೆಗೆ ಇಬ್ಬರು ಸಿಬ್ಬಂದಿಗಳಾದ ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರನನ್ನು ಸೇವೆಯಿಂದ ಅಮಾನತು ಮಾಡಿತ್ತು.
ಅಲ್ಲದೆ, ಈ ಕುರಿತು ಧಾರವಾಡ ಲೋಕಾಯುಕ್ತರಿಗೆ ಕೂಡ ನೊಂದ ರೈತ ಶಿವನಗೌಡ ಪಾಟೀಲ್, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಸದಸ್ಯರಾದ ಮಿಥುನ್ ಜಾಧವ್, ವಕೀಲರಾದ ಐ.ಕೆ. ಧರಣಗೌಡರ, ಗುರು ಅಂಗಡಿ, ರೈತ ಶಿವನಗೌಡ ಹಾಗೂ ಪದಾಧಿಕಾರಿಗಳು ದೂರು ಸಲ್ಲಿಸಿದ್ದರು.
ಆದರೂ ರಾಜ್ಯದ ಬಿಜೆಪಿ ಸರಕಾರ ಇದನ್ನು ಮೊದಲ ಹಂತದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಹಿನ್ನೆಲೆಯಲ್ಲಿ 420 ಕೇಸ್ ದಾಖಲಿಸಿದ ನಂತರ ಇದೀಗ ಮೊದಲ ಬಲೆ ಬಿದ್ದಿದೆ. ಇನ್ನುಳಿದ ಅಧಿಕಾರಿಗಳು ಯಾವಾಗ ಎಲ್ಲಿ ಹೇಗೆ ಬಲೆಗೆ ಬೀಳ್ತಾರೆ ಎಂಬುದನ್ನು ಕಾದು ನೋಡಬೇಕು.
ಈಗಾಗಲೇ ಸಿಐಡಿ ಅಧಿಕಾರಿಗಳು ಸ್ಥಳೀಯ ಪತ್ರಿಕೆಯೊಂದರ ಹೆಸರಿನಲ್ಲಿ ಏಜೆಂಟ್ ಗಿರಿ ಮಾಡಿಕೊಂಡು ಕೋಟಿಗಟ್ಟಲೇ ಅಕ್ರಮ ಸಂಪಾದನೆ ಮಾಡಿದ ಅಶ್ಫಕ್ ದುಂಡಸಿ ಅಲಿಯಾಸ್ ಮೆಹಬೂಬ್ ಸೇರಿ
ಹಲವರನ್ನು ತೀವ್ರವಾದ ವಿಚಾರಣೆಗೆ ಒಳಪಡಿಸಿ ಅನೇಕರ ಜನ್ಮ ಜಾಲಾಡಿರುವುದು ಇಲ್ಲಿ ಸ್ಮರಿಸಬಹುದು.
ಇನ್ನು ಹಲವರನ್ನು ತನ್ನ ಖೆಡ್ಡಾಕ್ಕೆ ಕೆಡವಲು ಸಿ ಐ ಡಿ ಬಲೆ ಹೆಣೆದಿರುವುದನ್ನು ತೀವ್ರವಾದ ಕುತೂಹಲ ಕೆರಳಿಸಿದೆ.