ರಾಯಚೂರು prajakiran.com : ತುಂಬಿದ ಹಳ್ಳ ದಾಟಿ ನಾಲ್ಕು ಜನರು ಬಂಡಿಯಲ್ಲಿ ಹೊಲಕ್ಕೆ ಹೋಗ್ತಿದ್ದಾಗ ಹಳ್ಳ ದಾಟುವ ಸಂದರ್ಭದಲ್ಲಿ ನೀರಿನ ರಭಸಕ್ಕೆ ಎತ್ತುಗಳು ಹಾಗೂ ರೈತರು ನೀರಿನಲ್ಲಿ ಕೊಚ್ಚಿ ಹೋಗಿದ ಘಟನೆ ರಾಯಚೂರಿನಲ್ಲಿ ಶುಕ್ರವಾರ ನಡೆದಿದೆ.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಎತ್ತಿ ಬಂಡಿಯಲ್ಲಿದ್ದ ನಾಲ್ಕು ಜನರೂ ಹಳ್ಳದಲ್ಲಿ ಕೊಚ್ಚಿ ಹೋಗುವಾಗ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಅದೃಷ್ಟವಶಾತ್ ಎತ್ತುಗಳೂ ಕೂಡಾ ಸುರಕ್ಷಿತವಾಗಿ ದಡ ಸೇರಿವೆ. ಓರ್ವ ಮಹಿಳೆ ಹಾಗೂ ಮೂವರು ಪುರುಷರು ಬಂಡಿಯಲ್ಲಿದ್ರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗೊಬ್ಬರ ತೆಗೆದುಕೊಂಡು ಬಂಡಿಯಲ್ಲಿ ಹಳ್ಳದಾಟಿ ಜಮೀನಿಗೆ ಹೋಗುವಾಗ ನಡೆದಿರೋ ಅವಘಡ ಇದಾಗಿದ್ದು, ರೈತರು ಕೆಲ ಕಾಲ ಆತಂಕಗೊಂಡು ರಕ್ಷಣೆಮಾಡುವಂತೆ ಅಂಗಲಾಚಿಕೊಂಡರು.
ಯರಗೇರಾ ಹಾಗೂ ಪುಚ್ಚಲದಿನ್ನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಕೆರೆ ಕೋಡಿ ತುಂಬಿದ್ದು, ಅಪಾರ ಪ್ರಮಾಣದ ನೀರು ಹಳ್ಳದಿಂದ ಹರಿಯುತ್ತಿದೆ.
ಇದೇ ರಸ್ತೆಯನ್ನ ದಾಟಿ ಜಮೀನುಗಳಿಗೆ ಹೋಗುವ ಅನಿವಾರ್ಯತೆ ರೈತರಿಗಿದೆ. ರೈತರು ಪ್ರಾಣಭಯದಲ್ಲಿಯೇ ಹೊಲಗಳಿಗೆ ತೆರಳುವಂತಾಗಿದೆ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.