ಧಾರವಾಡ ಜಿಲ್ಲೆಗೂ ಬ್ರಿಟನ್ ಆತಂಕ
ಧಾರವಾಡ prajakiran.com : ನಿನ್ನೆ ಡಿಸೆಂಬರ್ 21ರವರೆಗೆ ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ ಐದು ಜನರು ಆಗಮಿಸಿದ್ದಾರೆ.
ಈ ಎಲ್ಲಾ ಐದು ಜನರ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಯನ್ನು ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂದು ರಾತ್ರಿ ಅವರೆಲ್ಲರ ತಪಾಸಣೆ ವರದಿಗಳು ದೊರೆಯಲಿವೆ. ಮುಂಜಾಗ್ರತಾ ಕ್ರಮವಾಗಿ ಈ ಐದು ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ತಿಳಿಸಿದ್ದಾರೆ.