ರಾಜ್ಯ

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂಬರ 4ರಲ್ಲಿ ಬಿಜೆಪಿಗೆ 30 ಮುಖಂಡರ ಸಾಮೂಹಿಕ ರಾಜೀನಾಮೆ…..!?

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಅಖಾಡ ಅವಳಿನಗರದ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.

ಅದರಲ್ಲೂ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕನೇ ವಾರ್ಡ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಾಕೇಶ ದೊಡ್ಡಮನಿ ಬಹಿರಂಗವಾಗಿ ಸಮರ ಸಾರಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೊಡೆದಿದ್ದ ಬೆನ್ನಲ್ಲೇ ಪಕ್ಷ ನಿಷ್ಟರಿಗೆ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿ ಪಕ್ಷದ ವಿವಿಧ ಘಟಕದ 30 ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಗ್ರಾಮೀಣ ಶಾಸಕರ ನಡೆ ವಿರುದ್ದ ಒಳ ಒಳಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಅವರ ಬರೆದ ಪತ್ರ ಪ್ರಜಾಕಿರಣ.ಕಾಮ್ ಬಳಿ‌ ಲಭ್ಯವಿದೆ.

ಆದರೆ ಈ ಬಗ್ಗೆ ಯಾರೊಬ್ಬರೂ ಬಹಿರಂಗವಾಗಿ ಮಾತನಾಡದ ಸ್ಥಿತಿ ಇದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಮುಖಂಡರೊಬ್ಬರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಬಹುತೇಕ ಇದೇ ಚಿತ್ರಣ ಒಂಬತ್ತು ವಾರ್ಡನಲ್ಲಿದೆ.

ಎರಡನೇ ವಾರ್ಡ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮನೋಹರ ನಾಯ್ಕ ಅವರ ಪತ್ನಿ ಸ್ಪರ್ಧಿಸಿದ್ದಾರೆ.

ಮೂರನೇ ವಾರ್ಡ್ ನಲ್ಲಿ ಮಂಜುನಾಥ ನಡಟ್ಟಿ ಹಾಗೂ ಮಂಜುನಾಥ ಚೋಳಪ್ಪವರ, ಐದನೇ ವಾರ್ಡ್ ನಿಂದ ಸೂರಜ್ ಪುಡಕಲಕಟ್ಟಿ, ಆರನೇ ವಾರ್ಡ್ ನಿಂದ ವಿಠ್ಠಲ ಚವ್ಹಾಣ, ಎಂಟನೇ ವಾರ್ಡ್ ನಿಂದ ಮಂಜುನಾಥ ಹಿರೇಮಠ ಹೀಗೆ
ಬಿಜೆಪಿ ವಿರುದ್ದ ಬಂಡಾಯ ಅಭ್ಯರ್ಥಿಗಳು ತಿರುಗಿ ಬಿದ್ದಿದ್ದಾರೆ.

ಇದನ್ನು ಸಮರ್ಥವಾಗಿ ನಿಬಾಯಿಸಲು ಬಿಜೆಪಿ ವಿಫಲವಾಗಿದೆ. ಇದರ ಪರಿಣಾಮ ಸೆ. 6 ರಂದು ಗೊತ್ತಾಗಲಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *