ರಾಜ್ಯ

ಗಣಿನಾಡು ಬಳ್ಳಾರಿಯಲ್ಲಿ ಕಿಲ್ಲರ್ ಕರೋನಾ ಅಟ್ಟಹಾಸಕ್ಕೆ ಈವರೆಗೆ 32 ಬಲಿ ….!




ಬಳ್ಳಾರಿ prajakiran.com : ಗಣಿನಾಡು ಬಳ್ಳಾರಿಯಲ್ಲಿ ಕಿಲ್ಲರ್ ಕರೋನಾಕ್ಕೆ ಈವರೆಗೆ 32 ಜನ ಸಾವನ್ನಪ್ಪಿದ್ದು, ಸೋಂಕು ಸಾವಿರದ ಗಡಿ ಸಮೀಪಿಸಿರುವುದರಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಸಾವಿನ ಸಂಖ್ಯೆ ಹಾಗೂ ಸೋಂಕಿನ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಈಗಾಗಲೇ 919 ಜನರಿಗೆ ಸೋಂಕು ವಕ್ಕರಿಸಿರುವುದು ಜನತೆಯನ್ನು ಕಂಗಾಲಾಗುವಂತೆ ಮಾಡಿದೆ.

ತೋರಣಗಲ್ ನಲ್ಲಿರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ಸಿಬ್ಬಂದಿಯಿಂದಲೇ ಈವರೆಗೆ 400 ಕರೋನಾ ಪ್ರಕರಣ  ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.



ಈ ನಡುವೆ ಸ್ಥಳೀಯ ಜನತೆ ಕಂಪನಿ ಕೆಲಸ ಕಾರ್ಯ ಸ್ಥಗಿತಗೊಳಿಸುವಂತ ಕೂಗು ಕೂಡ ಕೇಳಿಬರುತ್ತಿದೆ.

ಈಹಿನ್ನಲೆಯಲ್ಲಿ ಜುಲೈ 3ರಿಂದ  ಜುಲೈ 11ರ ವರೆಗೆ ಕಂಪ್ಲೀಟ್ ಲಾಕ್ ಡೌನ್ ಮಾಡಲು ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಸೇವೆಗಳು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ನಾಳೆಯಿಂದ ಅಂಗಡಿ ಮುಗ್ಗಟ್ಟು ಕಂಪ್ಲೀಟ್ ಆಗಿರಲಿದ್ದು, ಇದು ಸ್ವಯಂಪ್ರೇರಿತ ಲಾಕ್ ಡೌನ್ ಆಗಿದೆ. ಹೇಗಾದರೂ ಮಾಡಿ ಜಿಲ್ಲೆಯ ಸೊಂಕು ನಿಯಂತ್ರಣಕ್ಕೆ ತರಲು ಸ್ಥಳೀಯರು ಮುಂದಾಗಿದ್ದಾರೆ. ಇದಕ್ಕಾದರೂ ಕರೋನಾ ತಗ್ಗುತ್ತಾ ಎಂಬುದು ಕಾದು ನೋಡಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *