ಬೆಂಗಳೂರು prajakiran. com : ಬೆಂಗಳೂರಿನ ಚಾಮರಾಜ ಪೇಟೆ ಕಾಂಗ್ರೆಸ್ ಶಾಸಕ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿ ಸೇರಿ ಏಕಕಾಲಕ್ಕೆ ಐದು ಕಡೆ ಎಸಿಬಿ ದಾಳಿ ನಡೆಸಿದೆ.
ಬೆಳ್ಳಂ ಬೆಳಗ್ಗೆ ಎಸಿಬಿ ದಾಳಿಯಿಂದಾಗಿ ಜಮೀರ್ ಅಹ್ಮದ್ ಹಾಗೂ ಅವರ ಕುಟುಂಬದ ಸದಸ್ಯರು ಶಾಕ್ ಗೆ ಒಳಗಾಗಿದ್ದಾರೆ.
ದಾಳಿ ವೇಳೆ ಅಪಾರ ಪ್ರಮಾಣದ ದಾಖಲೆ, ನಗ ನಾಣ್ಯ ದೊರೆತಿವೆ. ಕಂತೆ ಕಂತೆ ಹಣ ಎಣಿಸಲು ಎಸಿಬಿ ಅಧಿಕಾರಿಗಳು ಮಸೀನ್ ತೆಗೆದುಕೊಂಡು ಹೋಗಿದ್ದಾರೆ.
ಡಿವೈಎಸ್ಪಿ ನೇತೃತ್ವ ವಹಿಸಿದ್ದ ಈ ತಂಡದಲ್ಲಿ ಐವರು ಇನ್ಸಪೆಕ್ಟರ್ ಹಾಗೂ ಹತ್ತು ಹಲವು ಪೊಲೀಸರು ಐದು ವಾಹನದಲ್ಲಿ ಆಗಮಿಸಿದ್ದಾರೆ.
ಎಸಿಬಿ ದಾಳಿಯಿಂದಾಗಿ ಕುಪಿತಗೊಂಡ ಶಾಸಕ ಜಮೀರ್ ಅಹ್ಮದ್ ಬೆಂಬಲಿಗರು ಪ್ರತಿಭಟನೆ ನಡೆಸಿ, ಬಿಜೆಪಿ ಹಾಗೂ ಮೋದಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದು ಬಿಜೆಪಿ ಷಡ್ಯಂತ್ರವಾಗಿದೆ. ಬಿಜೆಪಿ ಶಾಸಕರು, ಸಂಸದರ ಮನೆ ಮೇಲೆ ಏಕೆ ದಾಳಿ ಆಗಲ್ಲ ಎಂದು ಜಮೀರ್ ಸಹೋದರ ಕಿಡಿಕಾರಿದರು.
ಎಸಿಬಿ ದಾಳಿ ಮಾಡಿದಾಗ ಪ್ರತಿ ಬಾರಿ ಬಿಜೆಪಿ ಯತ್ತ ಬೊಟ್ಟು ಮಾಡುವುದು ಕಾಂಗ್ರೆಸ್ ಪಕ್ಷದ ಚಾಳಿಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.