ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ರಣ ಕಹಳೆ
ಕಲಬುರಗಿ ಪ್ರಜಾಕಿರಣ. ಕಾಮ್ : ರಾಜ್ಯದ 28 ಲೋಕಸಭಾ ಕ್ಷೇತ್ರದ ಚುನಾವಣಾ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಕಲಬುರಗಿಯಲ್ಲಿ ಮತಬೇಟೆ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ವತಃ ವಿರೋಧ ಪಕ್ಷದ ನಾಯಕರು ದೇಶದಲ್ಲಿ ಬಿಜೆಪಿ ಮಂತ್ರ ಜಪಿಸುತ್ತಿದ್ದಾರೆ.
ಆದರೆ, ಗಾಂಧಿ ಪರಿವಾರದ ಸದಸ್ಯರು ದೇಶದ ಜನತೆಗೆ ಇಲ್ಲಸಲ್ಲದ ಯೋಜನೆಯ ಆಸೆ ಹಚ್ಚಿ ಅಧಿಕಾರಕ್ಕೆ ಬಂದ ನಂತರ ಲೂಟಿ ಮಾಡುವುದೇ ಕಾಯಕವಾಗಿದೆ ಎಂದು ಹಲವು ಹಗರಣದ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಖಜಾನೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲವೆಂದು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದರು.
ಅಲ್ಲದೆ, ಅಬ್ ಕೀ ಬಾರ್ ಮೋದಿ ಸರಕಾರ ಎಂದು ಕಾರ್ಯಕರ್ತರಿಂದಲೇ ಘೋಷಣೆ ಮೊಳಗಿಸಿದರು.