ಶಿವಮೊಗ್ಗ prajakiran.com : ಶಿವಮೊಗ್ಗದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ.
ಬೆಳಿಗ್ಗೆ 6 ನ ರಿಂದ 9 ಗಂಟೆಯ ವರೆಗೆ ತೆರೆಯಲು ಅವಕಾಶವಿದ್ದ ಅಂಗಡಿಗಳಿಗೆ ಸಮಯಾವಕಾಶದಲ್ಲಿ ಹೆಚ್ಚಿನ ಸಮುಯ ನೀಡಲು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಚಿವ ಈಶ್ವರಪ್ಪನವರ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಿದೆ.
ಕೆಲ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 12 ಗಂಟೆಯ ವರೆಗೆ ಕಾಲಾವಕಾಶ ನೀಡಲು ಸಭೆ ಸೂಚಿಸಿದರೆ ಉಳಿದ ಅಂಗಡಿಗಳಿಗೆ ಮಧ್ಯಾಹ್ನ ಎರಡರವರೆಗೆ ಅವಕಾಶ ನೀಡಲಾಗಿದೆ.
ಆದರೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿದೆ.
ಎಪಿಎಂಸಿ ತರಕಾರಿ ಮಾರುಕಟ್ಟೆ, ಗಾಂಧಿ ಬಜಾರ್ ದಿನಸಿ ಅಂಗಡಿ, ಅವರಿಗೆ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ತೆರೆಯಲು ಅವಕಾಶ, ಸ್ಟೇಷನರಿ, ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳ ಹೋಲ್ ಸೇಲ್ ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.
ಸಿಮೆಂಟ್, ಹಾರ್ಡ್ ವೇರ್ ಗಳಿಗೆ ಮದ್ಯಾಹ್ನ 2 ರ ವರೆಗೆ ಅವಕಾಶ ಕಲ್ಪಿಲಾಗಿದೆ.
ಹೋಟೆಲ್ ಮತ್ತು ತಿನ್ನುವ ವಸ್ತುಗಳಿಗೆ ಪಾರ್ಸಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.
ವೈನ್ ಶಾಪ್ ಗಳಿಗೆ ಮಧ್ಯಾಹ್ನ 2 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಂಗಾರದ ವ್ಯಾಪಾರಕ್ಕೆ ಅವಕಾಶವಿಲ್ಲ.
ಆದರೆ ಬಂಗಾರದ ಕೆಲಸಕ್ಕೆ ಅವಕಾಶಕಲ್ಪಿಸಲಾಗಿದೆ.
ಛಾಯಾಗ್ರಾಹಕರಿಗೆ ಬೆಳಿಗ್ಗೆ 10 ರದ ಮಧ್ಯಾಹ್ನ 2 ವರೆಗೆ ಅವಕಾಶ, ಫುಟ್ ಪಾತ್ ವ್ಯಾಪಾರಸ್ಥರಿಗೆ ತಿನಿಸು ಅಂಗಡಿ ಹೊರತು ಪಡಿಸಿ ಅವಕಾಶ ಕಲ್ಪಿಸಲಾಗಿದೆ.
ಕಟಿಂಗ್ ಅಂಗಡಿ, ಕಲ್ಯಾಣ ಮಂದಿರಕ್ಕೆ ಬಟ್ಟೆ ಹಾಗೂ ಜ್ಯುವೆಲ್ಲರಿ ಅಂಗಡಿಗಳಿಗೆ ಅವಕಾಶಗಳಿಲ್ಲ.