ಧಾರವಾಡ prajakiran.com : ಧಾರವಾಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಕೋವಿಡ್ ನಿಯಂತ್ರಣಕ್ಕಾಗಿ ಭಾರತೀಯ ಜೈನ್ ಸಂಘಟನೆ, ಹುಬ್ಬಳ್ಳಿ ಆರಂಭಿಸಿರುವ “ಮಿಷನ್ ಜೀರೊ” ಕಾರ್ಯಕ್ರಮಕ್ಕೆ ಧಾರವಾಡದ ಜನತಾ ಶಿಕ್ಷಣ ಸಂಸ್ಥೆ ಕೈ ಜೋಡಿಸಿದೆ.
ಇದಕ್ಕಾಗಿ ಕೋವಿಡ್ ಟೆಸ್ಟ್ ಮಾಡಿಸಲು ಜನತಾ ಶಿಕ್ಷಣ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ 6 ಶಾಲಾ ವಾಹನಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ಮಹಾವೀರ ಉಪಾಧ್ಯೆ, ಜೈನ್ ಸಂಘಟನೆಯ ಮುಖೇಶ್ ಹಿಂಗಾರ್, ಗೌತಮ್ ಭಾಫಣಾ ಉಪಸ್ಥಿತರಿದ್ದರು.
ಈ ಹಿಂದೆ ಹುಬ್ಬಳ್ಳಿಯ ಭಾರತೀಯ ಜೈನ್ ಸಂಘಟನೆ ಪದಾಧಿಕಾರಿಗಳು ಹಲವಾರು ಕ್ರೂಸರ್ ವಾಹನಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.