ಜಿಲ್ಲೆ

ಶಿವಮೊಗ್ಗದಲ್ಲಿ ಜೂ21 ರಿಂದ ಅನ್ ಲಾಕ್ ಪ್ರಕ್ರಿಯೆ : ಸಚಿವ ಈಶ್ವರಪ್ಪ

ಶಿವಮೊಗ್ಗ prajakiran.com : ಶಿವಮೊಗ್ಗದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ.

ಬೆಳಿಗ್ಗೆ 6 ನ ರಿಂದ 9 ಗಂಟೆಯ ವರೆಗೆ ತೆರೆಯಲು ಅವಕಾಶವಿದ್ದ ಅಂಗಡಿಗಳಿಗೆ ಸಮಯಾವಕಾಶದಲ್ಲಿ ಹೆಚ್ಚಿನ ಸಮುಯ ನೀಡಲು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಚಿವ ಈಶ್ವರಪ್ಪನವರ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಿದೆ.

ಕೆಲ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 12 ಗಂಟೆಯ ವರೆಗೆ ಕಾಲಾವಕಾಶ ನೀಡಲು ಸಭೆ ಸೂಚಿಸಿದರೆ ಉಳಿದ ಅಂಗಡಿಗಳಿಗೆ ಮಧ್ಯಾಹ್ನ ಎರಡರವರೆಗೆ ಅವಕಾಶ ನೀಡಲಾಗಿದೆ.

ಆದರೆ ಸಾಮಾಜಿಕ ಅಂತರ ಮತ್ತು‌ ಮಾಸ್ಕ್ ಕಡ್ಡಾಯವಾಗಿದೆ.

ಎಪಿಎಂಸಿ ತರಕಾರಿ‌ ಮಾರುಕಟ್ಟೆ, ಗಾಂಧಿ ಬಜಾರ್ ದಿನಸಿ ಅಂಗಡಿ, ಅವರಿಗೆ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ತೆರೆಯಲು ಅವಕಾಶ, ಸ್ಟೇಷನರಿ, ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳ ಹೋಲ್ ಸೇಲ್ ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.

ಸಿಮೆಂಟ್, ಹಾರ್ಡ್ ವೇರ್ ಗಳಿಗೆ ಮದ್ಯಾಹ್ನ 2 ರ ವರೆಗೆ ಅವಕಾಶ ಕಲ್ಪಿಲಾಗಿದೆ.

ಹೋಟೆಲ್ ಮತ್ತು ತಿನ್ನುವ ವಸ್ತುಗಳಿಗೆ ಪಾರ್ಸಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ವೈನ್ ಶಾಪ್ ಗಳಿಗೆ ಮಧ್ಯಾಹ್ನ 2 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಂಗಾರದ ವ್ಯಾಪಾರಕ್ಕೆ ಅವಕಾಶವಿಲ್ಲ.

ಆದರೆ ಬಂಗಾರದ ಕೆಲಸಕ್ಕೆ ಅವಕಾಶಕಲ್ಪಿಸಲಾಗಿದೆ.

ಛಾಯಾಗ್ರಾಹಕರಿಗೆ ಬೆಳಿಗ್ಗೆ 10 ರದ ಮಧ್ಯಾಹ್ನ 2 ವರೆಗೆ ಅವಕಾಶ, ಫುಟ್ ಪಾತ್ ವ್ಯಾಪಾರಸ್ಥರಿಗೆ ತಿನಿಸು ಅಂಗಡಿ ಹೊರತು ಪಡಿಸಿ ಅವಕಾಶ ಕಲ್ಪಿಸಲಾಗಿದೆ.

ಕಟಿಂಗ್ ಅಂಗಡಿ, ಕಲ್ಯಾಣ ಮಂದಿರಕ್ಕೆ ಬಟ್ಟೆ ಹಾಗೂ ಜ್ಯುವೆಲ್ಲರಿ ಅಂಗಡಿಗಳಿಗೆ ಅವಕಾಶಗಳಿಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *