ಧಾರವಾಡ prajakiran.com : ಏ.22 ರಂದು ನಿಯಮ ಉಲ್ಲಂಘಿಸಿ ಅನುಮತಿ ನೀಡಿದ್ದಕ್ಕಿಂತ ಅಧಿಕ ಜನರು ಸೇರಿ ಮದುವೆ ಸಮಾರಂಭ ನಡೆಯಲು ಅವಕಾಶ ನೀಡಿದ್ದ ಧಾರವಾಡದ ರಾಯಲ್ ಕಮ್ಯುನಿಟಿ ಹಾಲ್ಗೆ ಏ.23 ರಿಂದ ಏ.28 ರವರೆಗೆ ಆರು ದಿನಗಳ ಕಾಲ ಬೀಗ ಹಾಕಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ,ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಸಭಾಂಗಣದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ,
ಆದೇಶವನ್ನು ಜಾರಿಗೊಳಿಸಲು ಮಹಾನಗರಪಾಲಿಕೆಯ ವಲಯ 2 ರ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ