ಧಾರವಾಡ prajakiran.com : ಧಾರವಾಡ ಜಿಲ್ಲಾ ಕಂದಾಯ ಇಲಾಖೆಯು ನೇರ ನೇಮಕಾತಿ ಮೆರಿಟ್ ಆಧಾರದ ಮೇಲೆ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಫೆಬ್ರುವರಿ ೧೨,೨೦೨೦ ರಂದು ೧:೧ ಅನುಪಾತದಲ್ಲಿ ನೇರ ಮೀಸಲಾತಿ, ಸಮತಲ ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲೆ ಪರಿಶಿಷ್ಟ ಜಾತಿ ಮಾಜಿ ಸೈನಿಕ ರೋಷ್ಟರ್ ಬಿಂದುವಿಗೆ ಆಯ್ಕೆ ಮಾಡಲಾಗಿತ್ತು.
ಅಭ್ಯರ್ಥಿಯು ನೇಮಕಾತಿಗೆ ಅವಶ್ಯವಿರುವ ಮೂಲ ದಾಖಲೆಗಳನ್ನು ಈ ಕಾರ್ಯಾಲಯಕ್ಕೆ ಹಾಜರುಪಡಿಸಲು ನಿಯಮಾನುಸಾರ ಸಾಕಷ್ಟು ಕಾಲಾವಧಿಯನ್ನು ನೀಡಿದರೂ ಮೂಲ ದಾಖಲೆಗಳನ್ನು ಈ ಕಾರ್ಯಾಲಯಕ್ಕೆ ಹಾಜರುಪಡಿಸಿರುವುದಿಲ್ಲ.
ರೋಸ್ಟರ್ ಬಿಂದುವಿಗೆ ೧:೩ ಅನುಪಾತದಲ್ಲಿ ಮುಂದಿನ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಪರಿಷ್ಕೃತ ಪಟ್ಟಿಯನ್ನು http://dharwad.nic.in ರಲ್ಲಿ ಪ್ರಕಟಿಸಲಾಗಿದೆ.
ಈ ಅಭ್ಯರ್ಥಿಗಳು ಜೂನ್ ೧೨,೨೦೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯೊಳಗೆ ಧಾರವಾಡ ಜಿಲ್ಲಾಧಿಕಾರಿಗಳ, ಕಾರ್ಯಾಲಯಕ್ಕೆ ಹಾಜರಾಗಿ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ.
ಅಭ್ಯರ್ಥಿಗಳು ಅಂದು ಹಾಜರಾಗದೇ ಇದ್ದಲ್ಲಿ ಆಯ್ಕೆ ಪಟ್ಟಿಯಿಂದ ಕೈಬಿಡಲಾಗುವುದು ಮತ್ತು ನಿಯಮಾನುಸಾರ ನಂತರದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.