ರಾಜ್ಯ

ಕೆಐಎಡಿಬಿ ಬಹುಕೋಟಿ ಹಗರಣದ 20ನೇ ಆರೋಪಿ ಸಿಐಡಿ ಬಲೆಗೆ

*ಕೆ ಐ ಎ ಡಿ ಬಿ ಬಹುಕೋಟಿ ಹಗರಣದ 20ನೇ ಆರೋಪಿ ಸಿಐಡಿ ಬಲೆಗೆ*

*ಸತ್ತವನ ಹೆಸರಿನಲ್ಲಿಯೂ 3 ಕೋಟಿ ನುಂಗಿದ್ದ ಪ್ರಕಾಶ್‌ ಜಾಧವ್‌ ಅಂದರ್*

*ಸಿಐಡಿ ಅಗ್ನಿಗೆ 20ನೇ ಆಹುತಿ*

*ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೋರಾಟಕ್ಕೆ ಮತ್ತೊಂದು ಗರಿ*

ಧಾರವಾಡ ಪ್ರಜಾಕಿರಣ.ಕಾಮ್
ಧಾರವಾಡದ ಕೆಐಎಡಿಬಿಯ ಬಹುಕೋಟಿ ಹಗರಣದ ಇಪ್ಪತ್ತನೇ ಆರೋಪಿ ಸಿಐಡಿ ಬಲೆಗೆ ಬಿದ್ದಿದ್ದಾನೆ.

ಸಿಐಡಿಯ ಎಲ್.ಆರ್. ಅಗ್ನಿ ಅವರ ತಂಡ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪ್ರಕಾಶ್ ಜಾಧವ್‌ ಎಂಬಾತನ್ನು ಬಂಧಿಸಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಈತ ಧಾರವಾಡದ ಕೆಲಗೇರಿ ನಿವಾಸಿಯಾಗಿದ್ದ ಮದರಸಾಬ ಹಾಲಬಾವಿ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಮೂರು ಕೋಟಿ ಪಡೆದಿದ್ದ.

ಆದರೆ ಆತ ಸತ್ತು ಹಲವು ವರ್ಷಗಳೇ ಸಂದಿದ್ದವು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಪತ್ತೆ ಹಚ್ಚಿದ್ದರು.

ಅಲ್ಲದೆ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸರಕಾರಕ್ಕೆ ಒತ್ತಾಯಿಸಿದ್ದರು.ಇದೀಗ ಸಿಐಡಿ ತನಿಖೆಯಲ್ಲಿ ಅದು ಬಹಿರಂಗವಾಗಿದೆ.

ಈತನಿಗೆ ಕೆಐಎಡಿಬಿಯ ಅಧಿಕಾರಿಗಳಾದ ಶಂಕರ್‌ ತಳವಾರ, ನಿವೃತ್ತ ಎಸ್‌ಎಲ್‌,ಓ ವಿ.ಡಿಸಜ್ಜನ್‌, ಎಂ.ಕೆ.ಶಿಂಪಿ, ಹೇಮಚಂದ್ರ ಚಿಂತಾಮಣಿ,ಎಜೆಂಟ್ ಅಷ್ಪಾಕ್‌ ದುಂಡಿಸಿ, ಇವರೆಲ್ಲರೂ ಆರೋಪಿ ಪ್ರಕಾಶ ಜಾಧವ ಜೊತೆಗೆ ಸೇರಿಕೊಂಡು 3 ಕೋಟಿ ರೂಪಾಯಿ ಸ್ವಾಹಾ ಮಾಡಿದ್ದಾರೆ.

ಅದು ನಕಲಿ ಪಾನ್‌ ಕಾರ್ಡ್‌, ನಕಲಿ ಆಧಾರ್ ಕಾರ್ಡ್, ಬಳಿಸಿ ಬ್ಯಾಂಕ್‌ ನಲ್ಲಿ ಖಾತೆ ತೆಗೆದು ಈಗ ಸಿಐಡಿ ಅತಿಥಿಗಳಾಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *