ಸಾವಿರಾರು ಜನರಿಂದ ಅದ್ದೂರಿ ಸ್ವಾಗತ
ಕೋವಿಡ್ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ
ಕ್ಯಾರೆ ಎನ್ನದ ಬೆಳಗಾವಿ ಜಿಲ್ಲೆಯ ಪೊಲೀಸರು
ಬೆಳಗಾವಿ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಮಾಜಿ ಸಚಿವ ವಿನಯ ಕುಲಕರ್ಣಿ ಒಂಬತ್ತು ತಿಂಗಳ ಹದಿನಾರು ದಿನದ ಬಳಿಕ ಷರತ್ತು ಬದ್ಧ ಜಾಮೀನು ನೀಡಿದ್ದ ಸುಪ್ರೀಂಕೋರ್ಟ್ ಆದೇಶದ ಮೇಲೆ ಬೆಳಗಾವಿ ಹಿಂಡಲಗಾ ಜೈಲಿ ನಿಂದ ಬಿಡುಗಡೆ ಮಾಡಲಾಯಿತು.
ಈ ವೇಳೆ ಅವರ ಸಾವಿರಾರು ಜನ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿನಯ ಹಣೆಗೆ ತಿಲಕ ಇಟ್ಟು ಸಿಹಿ ತಿನ್ನಿಸಿ ಶುಭ ಕೋರಿದರು.
ಬೆಳಗಾವಿ ಜಿಲ್ಲೆ ಗಡಿ ಭಾಗವಾಗಿದ್ದರಿಂದ ಅಲ್ಲಿ ವಿಕೇಂಡ್ ಕರ್ಪ್ಯೂ ಇದ್ದರೂ
ಸಾಮಾಜಿಕ ಅಂತರ, ಮಾಸ್ಕ್ ಕಂಡು ಬರಲಿಲ್ಲ.
ಕೋವಿಡ್ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಮಾಡಿ ರೋಡ್ ನಡೆಸಿದರು.
ವಿನಯ ಕುಲಕರ್ಣಿ ಕೂಡ ಮೀಸೆ ತಿರುವಿ ಬಿಲ್ಡ್ ಅಪ್ ನೀಡಿದ್ದು ಕಂಡು ಬಂತು.ಅವರ ಬೆಂಬಲಿಗರ ಘೋಷಣೆ, ಕೇಕೆ ಅಬ್ವರ ಜೋರಾಗಿತ್ತು.
ಇಷ್ಟೆಲ್ಲಾ ಆದರೂ ಬೆಳಗಾವಿ ಪೊಲೀಸರು ಕ್ಯಾರೆ ಎನ್ನದಿರುವುದು ಅಚ್ಚರಿ ಸಂಗತಿ.