ಶ್ರೀನಗರ Prajakiran.com : ಜಮ್ಮು ಕಾಶ್ಮೀರ್ದ ಶೋಫಿಯಾನ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ.
ಘಟನೆಯಲ್ಲಿ ಓರ್ವ ಭಯೋತ್ಪಾದಕ ಭದ್ರತಾ ಪಡೆಗಳ ವಶವಾಗಿದ್ದಾನೆ.
ಕನಿಗಾಮ್ ಪ್ರದೇಶದಲ್ಲಿ ಉಗ್ರ ಸಂಘಟನೆಗೆ ಹೊಸದಾಗಿ ಸೇರ್ಪಡೆಯಾದ ನಾಲ್ವರು ಉಗ್ರರಿದ್ದರು.
ಅವರನ್ನು ಶರಣಾಗುವಂತೆ ಬಹಳ ಪ್ರಯತ್ನಿಸಲಾಯಿತು. ಅದನ್ನು ಲೆಕ್ಕಿಸದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಅದಲ್ಲದೆ ಗ್ರೆನೇಡ್ ದಾಳಿ ಕೂಡ ನಡೆಸಿದರು.
ಪ್ರತಿಯಾಗಿ ಗುಂಡು ಹಾರಿಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದರು.
ಶರಣಾದ ಉಗ್ರನನ್ನು ತೌಸಿಫ್ ಅಹಮದ್ ಎಂದು ಗುರುತಿಸಲಾಗಿದೆ.