ಅಪರಾಧ

ಧಾರವಾಡದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಕಾರು ….!

ಧಾರವಾಡ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ಧಾರವಾಡದಲ್ಲಿ ಸೋಮವಾರ ನಡೆದಿದೆ. ಅದರ ಪರಿಣಾಮವಾಗಿ ಸಂಪೂರ್ಣ ಕಾರು ಜಖಂಗೊಂಡಿದ್ದು, ಧಾರವಾಡದ ಸಾಧನಕೆರಿಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋವಾ ರಸ್ತೆ ಮೂಲಕ ಹೊರಟಿದ್ದ ವೇಳೆ ಮನೆಯೊಂದರ ಕಂಪೌಂಡ್ ಗೆ ಈ ಕಾರು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಗ್ಲಾಸು ಪುಡಿ ಪುಡಿಯಾಗಿದೆ. Share on: […]

ರಾಜ್ಯ

ಧಾರವಾಡದಲ್ಲಿ ಧಾರಾಕಾರ ಮಳೆಗೆ ನೂರಾರು ಮನೆಗಳಿಗೆ ನುಗ್ಗಿದ ನೀರು : ಗ್ರಾಮೀಣ ಶಾಸಕರ ವಿರುದ್ದ ಜನತೆ ಆಕ್ರೋಶ

ಧಾರವಾಡ prajakiran.com : ಧಾರವಾಡದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಸಾಧನಕೇರಿಯ ಬಳಿಯ ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ್ ಪ್ಲಾಟ್ ನ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೆ, ಮುಂದೆ ಸಾಧನಕೇರಿಯ ನೀರು ಕೋಡಿ ಹರಿದು ಬ್ರಹ್ಮಚೈತನ್ಯ ಪಾರ್ಕ್ ನಲ್ಲಿ ಕೂಡ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅದೇ ರೀತಿ ದೊಡ್ಡ ನಾಯಕನಕೊಪ್ಪ, ಕೆ.ಎಚ್. ಬಿ ಕಾಲೋನಿಯ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಜನತೆ ಕಕ್ಕಾಬಿಕ್ಕಿಯಾಗಿದ್ದು, ಹಲವು ಗಂಟೆಗಳ ಕಾಲ […]