ರಾಜ್ಯ

ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ಖಾಸಗಿಕರಣಕ್ಕೆ ವಿರೋಧ

ಧಾರವಾಡ prajakiran.com : ಮುಧೋಳದ ರನ್ನ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ರಾಜ್ಯದ ಬಿಜೆಪಿ ಸರಕಾರದ ಪ್ರಯತ್ನವನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಖಂಡಿಸಿದ್ದಾರೆ. ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಖಾಸಗೀಕರಣ ಕಾರ್ಯ ಆಘಾತಕಾರಿ ವಿಷಯವಾಗಿದೆ. ಹಲವಾರು ವರ್ಷಗಳಿಂದ ಸಾವಿರಾರು ರೈತರು ಶ್ರಮವಹಿಸಿದ ಫಲವಾಗಿರುವ ರನ್ನ ಸಕ್ಕರೆ ಕಾರ್ಖಾನೆಯನ್ನು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸ್ವಾಮ್ಯದ ಮಾಲೀಕರಿಗೆ ವಹಿಸಲು ಹೊರಟಿರುವ ನಡೆ ಸರಿಯಲ್ಲ. ಸಹಕಾರಿ ವಲಯದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಲು ತರಾತುರಿ ನಡೆಸಿರುವ ಸರಕಾರದ ನಿರ್ಣಯ ಖಂಡನೀಯ. […]