ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ : ಯಾರನ್ನು ಸಂಪರ್ಕಿಸಿಲ್ಲ ಎಂದ ಕೇಂದ್ರ ಸಚಿವ

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಜಿಲ್ಲಾಧ್ಯಕ್ಷರಿಂದ ಹಿಡಿದು ರಾಜ್ಯಅಧ್ಯಕ್ಷರವರೆಗೆ, ಅಲ್ಲದೆ ರಾಷ್ಟ್ರೀಯಅಧ್ಯಕ್ಷರವರೆಗೆ ಅವರು ಯಾರನ್ನು ಸಂಪರ್ಕಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು. ಅವರು ಭಾನುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಯಾರಿಗೆ ಸಂಪರ್ಕಿಸಿದ್ದಾರೆ ಎಂಬುದು ನಮಗೆ ಗೋತ್ತಿಲ್ಲ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಲಿ ಪ್ರಸ್ತಾಪ ಕೂಡ ಆಗಲಿ ಇಲ್ಲ. ಹೀಗಾಗಿ ನಾನು ಊಹಾಪೋಹ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲ್ಲ  ಎಂದರು. […]