ರಾಜ್ಯ

ಪುತ್ಥಳಿ ಜೊತೆಗೆ ರಾಜಕಾರಣ ಮಾಡಬಾರದು ಎಂದ ಲಕ್ಷ್ಮಿ ಹೆಬ್ಬಾಳಕರ್

ಧಾರವಾಡ prajakiran.com : ಸಂಗೋಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಇಬ್ಬರು ನಮ್ಮ ದೇಶದ ಹೆಮ್ಮೆ. ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಯಾರೊಬ್ಬರು ರಾಜಕಾರಣ ಮಾಡಬಾರದು ಎಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರು ನಮ್ಮ ನೆಲದ ವೀರಪುತ್ರರು. ಈ ವಿಷಯದಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದರು. ಸಂಗೋಳ್ಳಿ ರಾಯಣ್ಣನ ತ್ಯಾಗ ಬಲಿದಾನ ಒಂದಡೆಯಾದರೆ ಶಿವಾಜಿ ಮಹಾರಾಜರು ಹೋರಾಟದ ಕಿಚ್ಚು […]