ಧಾರವಾಡ prajakiran.com : ಸಂಗೋಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಇಬ್ಬರು ನಮ್ಮ ದೇಶದ ಹೆಮ್ಮೆ. ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಯಾರೊಬ್ಬರು ರಾಜಕಾರಣ ಮಾಡಬಾರದು ಎಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರು ನಮ್ಮ ನೆಲದ ವೀರಪುತ್ರರು. ಈ ವಿಷಯದಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದರು.
ಸಂಗೋಳ್ಳಿ ರಾಯಣ್ಣನ ತ್ಯಾಗ ಬಲಿದಾನ ಒಂದಡೆಯಾದರೆ ಶಿವಾಜಿ ಮಹಾರಾಜರು ಹೋರಾಟದ ಕಿಚ್ಚು ಮತ್ತೊಂದು ಕಡೆ ಇದೆ. ಎರಡು ಸಮುದಾಯದಲ್ಲಿ ವಿಷಬೀಜ ಬಿತ್ತುವುದು ಕಳವಳಕಾರಿ ಸಂಗತಿಯಾಗಿದೆ.
ತಕ್ಷಣ ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಶಾಂತಿ ಸ್ಥಾಪಿಸುವಂತೆ ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಮನವಿ ಮಾಡಿದರು.
ನಾನು ಎಂಇಎಸ್ ಬಗ್ಗೆ ಯಾವಾಗಲೂ ವಿರೋಧಿಸುತ್ತಾ ಬಂದಿದ್ದೇನೆ. ನಾವೆಲ್ಲಅವರನ್ನು ಕಂಡಿದ್ದೇವೆ. ಎಂಇಎಸ್ ನ ಈ ಕೃತ್ಯಗಳನ್ನ ಖಂಡಿಸುತ್ತೇನೆ ಎಂದರು.