ಧಾರವಾಡ prajakiran.com : ಹುಬ್ಭಳ್ಳಿ-ಧಾರವಾಡದ ಕೋರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸರಿಗೂ ಕೋರೋನಾ ಕರಿ ಛಾಯೆ ಬಿದ್ದಿದ್ದು, ಮತ್ತೆ ಅದನ್ನ ಜಯಿಸಿ ಮರಳಿ ಕರ್ತವ್ಯಕ್ಕೆ ಬಂದವರಿಗೆ ಸನ್ಮಾನ ಮಾಡಲಾಗುತ್ತಿದೆ. ಅದರಲ್ಲೂ ಧಾರವಾಡದ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಕೂಡಾ ಒಬ್ಬರು. ಕರ್ತವ್ಯದ ಮಧ್ಯದಲ್ಲೇ ಕರೊನಾ ಸೋಂಕು ತಗುಲಿದ್ದ ಮುಲ್ಲಾ ಬೇಗಂ ಸದ್ಯ ಗುಣಮುಖರಾಗಿ ಸೇವೆಗೆ ಹಾಜರಾಗಿದ್ದಾರೆ. ಹೀಗಾಗಿ ಅವರಿಗೆ ಧಾರವಾಡದ ಎಸಿಪಿ ಅನುಷಾಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಧಾರವಾಡ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಈ ಅಪರೂಪದ ಘಟನೆಗೆ ಸಾಕ್ಷಿಯಾದರು. […]