ಅಂತಾರಾಷ್ಟ್ರೀಯ

ಕೊನೆಗೂ ಭಾರತದ ವಾಯುನೆಲೆಗೆ ಬಂದಿಳಿದ ಐದು ರಫೇಲ್ ಯುದ್ದ ವಿಮಾನ

ನವದೆಹಲಿ prajakiran.com :  ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ದೇಶದ ಜನತೆಗೆ ಕುತೂಹಲ ಕೆರಳಿಸಿದ್ದ ರಫೇಲ್ ಯುದ್ದ ವಿಮಾನ ಕೊನೆಗೂ ನಿರೀಕ್ಷೆಯಂತೆ ಭಾರತದ ವಾಯುನೆಲೆ ಪ್ರದೇಶವಾದ ಹರಿಯಾಣದ ಅಂಬಾಲಗೆ ಬುಧವಾರ ಬಂದಿಳಿದವು. ಎರಡು ಸುಖೋಯಿ ಯುದ್ದವಿಮಾನಗಳು ಐದು ರಫೇಲ್ ಯುದ್ದ ವಿಮಾನಗಳಿಗೆ ಎಸ್ಕಾರ್ಟ್ ಮಾಡಿ ಕೊಂಡು ಅದ್ದೂರಿ ಸ್ವಾಗತ ಕೋರಿದವು. ಬಾನಂಗಳದಲ್ಲಿ ಅವರು ಸಾಲಾಗಿ ಹಾರಾಟ ಮಾಡಿಕೊಂಡು ಬರುವ ದೃಶ್ಯಗಳನ್ನು ನೋಡಿ ಭಾರತೀಯರು ಕಣ್ಣುತುಂಬಿಸಿಕೊಂಡರು. ಭಾರತದ ನೌಕಾಪಡೆಯಿಂದ ಜಲವಂದನೆಯ ಮೂಲಕ ಸ್ವಾಗತಕೋರಲಾಯಿತು. ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್ […]