ರಾಜ್ಯ

ಧಾರವಾಡದ ಅಮರಗೋಳದಲ್ಲಿ ಪಕ್ಷಿ ಹಿಡಿಯುತ್ತಿದ್ದ ಆರೋಪಿ ಬಂಧನ

ಧಾರವಾಡ prajakiran.com : ಕೌಜಗ ಜಾತಿಯ ಪಕ್ಷಿಗಳನ್ನು ಕಟ್ಟಿಗೆಯಿಂದ ಮಾಡಿದ ಬಲೆಯಿಂದ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಧಾರವಾಡ ಅರಣ್ಯ ವಿಭಾಗದ ಹುಬ್ಬಳ್ಳಿ ವಲಯದ ಅಮರಗೋಳದ ಎ.ಪಿ.ಎಮ್.ಸಿ ಆವರಣದಲ್ಲಿ ಕೌಜಗ ಜಾತಿಯ ಪಕ್ಷಿಗಳನ್ನು ಕಟ್ಟಿಗೆಯಿಂದ ಮಾಡಿದ ಬಲೆಯಿಂದ ಸೆರೆ ಹಿಡಿಯುವಾಗ ಖೆಡ್ಡಾಕ್ಕೆ ಕೆಡವಲಾಗಿದೆ.  ಬಂಧಿತನನ್ನು ರಫೀಕ್ ಗುಲಬಸಾಬ ಯಲಿಗಾರ ಎಂದು ಗುರುತಿಸಲಾಗಿದ್ದು, ಇತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನೆಡಸುತ್ತಿದ್ದೇವೆ […]