ರಾಜ್ಯ

ಬಿಜೆಪಿ ಮಾಜಿ ಶಾಸಕ ಸಿ. ಗುರುಸ್ವಾಮಿ ನಿಧನ

ಚಾಮರಾಜನಗರ prajakiran.com : ಚಾಮರಾಜನಗರದ ಮೊದಲ ಬಿಜೆಪಿ ಶಾಸಕರಾಗಿದ್ದ ಸಿ.ಗುರುಸ್ವಾಮಿ ಬುಧವಾರ ಬೆಳಗ್ಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಆ. 5ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರು ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾದರು.   ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ವಾಟಾಳ್ ನಾಗರಾಜ್ ಅವರನ್ನು 1999ರಲ್ಲಿಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ವೃತ್ತಿಯಿಂದ ವಕೀಲರಾಗಿದ್ದಅವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಆರಂಭಿಸಿದ್ದರು. ಕೇಂದ್ರದ ಮಾಜಿ […]

ರಾಜ್ಯ

ತುಪ್ಪರಿಹಳ್ಳ ಪ್ರವಾಹದಿಂದ ನವಲಗುಂದನ ಶಿರೂರಗೆ ೫ ದಿನ ಸಂಪರ್ಕ ಕಡಿತ

ನವಲಗುಂದ prajakiran.com : ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಶಿರೂರು ಸಂಪರ್ಕಿಸುವ ಹಾರೋಬೆಳವಡಿ ಹತ್ತಿರ ಇರುವ ತುಪ್ಪರಿಹಳ್ಳ ಸೇತುವೆಗೆ ಪ್ರವಾಹ ಬಂದಿರುವುದರಿಂದ ೫ ದಿನ ಗ್ರಾಮಕ್ಕೆ ಸಂಪರ್ಕವೇ ಇರಲಿಲ್ಲ. ಇದರಿಂದಾಗಿ ಶಿರೂರ, ಆಯಟ್ಟಿ, ಬ್ಯಾಲ್ಯಾಳ, ಹಣಸಿ, ಶಿರಕೋಳ, ಬಳ್ಳೂರ, ಅಳಗವಾಡಿ, ಹಾಳಕುಸುಗಲ್ಲ ಹಾಗೂ ಶಾನವಾಡ ಗ್ರಾಮಗಳ ಮುಂಗಾರು ಬೆಳೆ ಹಾಳಾಗಿವೆ.ಹೀಗಾಗಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ. ೧ ವರ್ಷ ಕಳೆದರೂ ಸೇತೆವೆ […]