ರಾಜ್ಯ

ಯೋಗೀಶಗೌಡ ಹತ್ಯೆ ಪ್ರಕರಣ : ಜಾಮೀನು ಕೋರಿ ಮಾಜಿ ಸಚಿವ ವಿನಯ ಕುಲಕರ್ಣಿಅರ್ಜಿ

ಧಾರವಾಡ prajakiran.com : ಧಾರವಾಡದ ಬಿಜೆಪಿ ಜಿ.ಪಂ. ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜಾಮೀನು ಕೋರಿ ಅವರ ಪರ ವಕೀಲರು  ಅರ್ಜಿ ಸಲ್ಲಿಸಿದ್ದಾರೆ. ಧಾರವಾಡದ ಮೂರನೇ ಅಧಿಕ ವಿಶೇಷ ಹಾಗೂ ಸಿಬಿಐ ನ್ಯಾಯಾಲಯಕ್ಕೆ ಮಂಗಳವಾರ ಅವರ ವಕೀಲರಾದ ಭರತ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯ ಕೆಲವು ನಿಯಮಗಳನ್ನು ಅಳವಡಿಸಿಕೊಂಡಿದ್ದು, ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನು ಒಂದು ದಿನ ಕಾಯ್ದಿಟ್ಟು, ಸ್ಯಾನಿಟೈಜ್ ಮಾಡಿದ ನಂತರವೇ ನೋಂದಣಿ ಮಾಡಲಾಗುತ್ತದೆ. ೨೪ ಗಂಟೆಗಳ […]

ರಾಜ್ಯ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಉರುಳಾಗುತ್ತಿರೋ ಸಿಬಿಐ ತನಿಖೆ

ಹುಬ್ಬಳ್ಳಿ prajakiran.com : ಯೋಗೇಶಗೌಡ ಹತ್ಯೆ ಪ್ರಕರಣ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಉರುಳಾಗುತ್ತಿದೆ. ಈ ಕೊಲೆ ಪ್ರಕರಣದಲ್ಲಿ ಈವರೆಗೆ 600ಕ್ಕಿಂತ ಹೆಚ್ಚು ಜನರ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಸಿಬಿಐ  ಹಲವು ಮಹತ್ವದ ಅಂಶಗಳನ್ನು ಪತ್ತೆಹಚ್ಚಿದೆ ಎನ್ನಲಾಗಿದೆ. ಯೋಗಿಶಗೌಡ ಕೊಲೆ ನಡೆದ ವೇಳೆ ದೆಹಲಿಯಲ್ಲಿರೋದಾಗಿ ದಾಖಲೆ ಸೃಷ್ಟಿ ಮಾಡಿದ್ದ ಕುರಿತು ವಿನಯ ಕುಲಕರ್ಣಿ ಸಿಬಿಐ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ನಿನ್ನೆ ವಿನಯ್ ಕುಲಕರ್ಣಿ ಹಾಗೂ ಅವರ ಆಪ್ತ ಕಾರ್ಯದರ್ಶಿ ಸೋಮು […]