ರಾಜ್ಯ

ಹುಬ್ಬಳ್ಳಿ-ಧಾರವಾಡ ಅವಳಿನಗರ ನಡುವಿನ ಬಿಆರ್‌ಟಿಎಸ್ ಯೋಜನೆ ಕರ್ಮಕಾಂಡ ಬಿಚ್ಚಿಟ್ಟ ನೀರಲಕೇರಿ

ಧಾರವಾಡ prajakiran.com : ಹುಬ್ಬಳ್ಳಿ–ಧಾರವಾಡ ಅವಳಿನಗರ ನಡುವಿನ ಬಿಆರ್‌ಟಿಎಸ್ ಯೋಜನೆಯ ಕಳಪೆ ಕಾಮಗಾರಿ ಯಿಂದಾಗಿ ನವಲೂರು ಬಳಿಯ ಸೇತುವೆ ಪಿಲ್ಲರ್ ಕ್ರ್ಯಾಕ್ ಬಿಟ್ಟಿದೆ. ಏನಾದರೂ ದೊಡ್ಡ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಹೈಕೋರ್ಟ್ ವಕೀಲರು  ಆಗಿರುವ ಕಾಂಗ್ರೆಸ್ ಮುಖಂಡ  ಪಿ.ಎಚ್.ನೀರಲಕೇರಿ ಕಿಡಿಕಾರಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಕರ್ಮಕಾಂಡವನ್ನು ಎಳೆ ಎಳೇಯಾಗಿ ಬಿಡಿಸಿಟ್ಟರು. ಕಳಪೆ ಕಾಮಗಾರಿಯ ಲೋಪಗಳ ಬಗ್ಗೆ ಒಂದು ತಿಂಗಳೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಶಾಸಕರು […]