ರಾಜ್ಯ

ಧಾರವಾಡದ ಚರಂತಿಮಠ ಗಾರ್ಡನ್, ಲೈನ್ ಬಜಾರ ನಿವಾಸಿ ಸೇರಿ ಕರೋನಾಕ್ಕೆ ನಾಲ್ವರ ಸಾವು

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಕರೋನಾ ಎರಡು ಸಾವಿರದ ಗಡಿ ದಾಟಿದ್ದು, ಜಿಲ್ಲೆಯ ಜನತೆ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಪ್ರತಿನಿತ್ಯ ನೂರರ ಗಡಿ ದಾಟುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳು  ಈವರೆಗೆ ಒಟ್ಟು 2041 ಕ್ಕೆ ಬಂದು ನಿಂತಿದೆ. ಇದರಲ್ಲಿ ಈವರೆಗೆ 696 ಜನ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1283 ಪ್ರಕರಣಗಳು  ಸಕ್ರಿಯವಾಗಿದ್ದರೆ, ಈವರೆಗೆ ಚಿಕಿತ್ಸೆ ಫಲಿಸದೆ 62  ಜನ ಮೃತಪಟ್ಟಿದ್ದಾರೆ. ಭಾನುವಾರದ ಹೆಲ್ತ್ ಬುಲೇಟಿನ್ ಪ್ರಕಾರ ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ […]