ಚಿಕ್ಕೋಡಿ prajakiran.com : ಪ್ರವಚನ ಮಾಡುತ್ತಲೇ ತೀವ್ರ ಹೃದಯಾಘಾತದಿಂದ ಸ್ವಾಮೀಜಿಯೊಬ್ಬರು ಪರಮಾತ್ಮನ ಪಾದ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಸಂಗನಬಸವ ಮಹಾಸ್ವಾಮೀಜಿ (೫೩) ಅವರೇ ಹೃದಯಾಘಾತದಿಂದ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ.
ಇದು ನವೆಂಬರ್ 6 ನೇ ತಾರೀಕಿನಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವಂಬರ್ ೬ ರಂದು ತಮ್ಮದೇ ಹುಟ್ಟು ಹಬ್ಬ ಆಚರಿಸಿಕೊಂಡು ಆರ್ಶೀರ್ವಚನ ನೀಡುತ್ತಿದ್ದ ವೇಳೆ ಸ್ವಾಮೀಜಿ ವಿಧಿವಶರಾದರು.
ಹುಟ್ಟು ಹಬ್ಬದ ದಿನವೇ ಹೃದಯಾಘಾತದಿಂದ ಸ್ವಾಮೀಜಿ ಲಿಂಗೈಕ್ಯರಾಗಿರುವುದು ಭಕ್ತರಿಗೆ ಅಪಾರ ನೋವುಂಟು ಮಾಡಿದೆ.
ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ್ ಮಠದ ಸಂಗನಬಸವ ಸ್ವಾಮೀಜಿಯವರು
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳಗ ಗ್ರಾಮದವರು.
ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.