ಹೈದರಾಬಾದ್ (ಆಂಧ್ರಪ್ರದೇಶ) prajakiran.com : ಇಲ್ಲಿನ ಕಲ್ಲು ಕ್ವಾರಿವೊಂದರಲ್ಲಿ ಸ್ಪೋಟ ಸಂಭವಿಸಿದ್ದು, 10 ಕ್ಕೂ ಹೆಚ್ಚು ಜನ ಕಾರ್ಮಿಕರು ಮೃತಪಟ್ಟಿದ್ದಾರೆ.
ಕಲ್ಲು ಬಂಡೆ ಒಡೆಯುವ ಸಮಯದಲ್ಲಿ ಬಂಡೆ ಸಿಡಿಸುವ ಸಿಡಿಮದ್ದುಗಳನ್ನು ಪಕ್ಕದಲ್ಲಿಯೇ ಇಟ್ಟುಕೊಂಡು, ಕಲ್ಲು ಬಂಡೆಗೆ ಡ್ರಿಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ವೇಳೆ ಆಕಸ್ಮಿಕ ವಾಗಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.
ಆದರೆ,ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.