ಛತ್ತಿಸಗಡ prajakiran. com : ಸಿಡಿಲ ಬಡಿತದಿಂದ ಪ್ರಜ್ಞೆ ಕಳೆದುಕೊಂಡವನಿಗೆ ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮರುಜೀವ ನೀಡಬಹುದೆಂಬ ಮೂಡನಂಬಿಕೆಯಿಂದ ಕುಟುಂಬ, ಇದೀಗ ಮನೆಯ ಸದಸ್ಯನನ್ನೇ ಕಳೆದುಕೊಂಡಿದೆ.
ಈ ಅಮಾನವೀಯ ಘಟನೆ ನಡೆದಿರುವುದು ಛತ್ತೀಸ್ಗಢದ ಸರ್ಗುಜಾ ಜಿಲ್ಲೆಯಲ್ಲಿ. ಲಖನ್ಪುರ್ ಮಟ್ಕಿ ಎಂಬುವಾತನೇ ಮೃತ ದುರ್ದೈವಿ.
ಮಟ್ಕಿ ಅವರು ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಬಡಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ.
ಮಟ್ಕಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ತಲೆ ಭಾಗವನ್ನು ಮಾತ್ರ ಬಿಟ್ಟು ಅರ್ಧ ಸಮಾಧಿ ಮಾಡಿದ್ದಾರೆ.
ಆದರೂ ಮಟ್ಕಿ ಅವರಿಗೆ ಎಚ್ಚರವಾಗದಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆಂದ ವೈದ್ಯರು ದೃಢಪಡಿಸಿದ್ದಾರೆ.