ಅಂತಾರಾಷ್ಟ್ರೀಯ

ಸಿಡಿಲು ಬಡಿದು ಪ್ರಜ್ಞೆ ತಪ್ಪಿದವನ ಎಚ್ಚರ ಮಾಡಲು ಸಗಣಿಯಲ್ಲಿ ಹೂತ ಜನ….!

ಛತ್ತಿಸಗಡ prajakiran. com : ಸಿಡಿಲ ಬಡಿತದಿಂದ ಪ್ರಜ್ಞೆ ಕಳೆದುಕೊಂಡವನಿಗೆ ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮರುಜೀವ ನೀಡಬಹುದೆಂಬ ಮೂಡನಂಬಿಕೆಯಿಂದ ಕುಟುಂಬ, ಇದೀಗ ಮನೆಯ ಸದಸ್ಯನನ್ನೇ ಕಳೆದುಕೊಂಡಿದೆ.

ಈ ಅಮಾನವೀಯ ಘಟನೆ ನಡೆದಿರುವುದು ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯಲ್ಲಿ. ಲಖನ್​ಪುರ್​ ಮಟ್ಕಿ ಎಂಬುವಾತನೇ ಮೃತ ದುರ್ದೈವಿ.

ಮಟ್ಕಿ ಅವರು ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಬಡಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾರೆ.

ಮಟ್ಕಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ತಲೆ ಭಾಗವನ್ನು ಮಾತ್ರ ಬಿಟ್ಟು ಅರ್ಧ ಸಮಾಧಿ ಮಾಡಿದ್ದಾರೆ.

ಆದರೂ ಮಟ್ಕಿ ಅವರಿಗೆ ಎಚ್ಚರವಾಗದಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆಂದ ವೈದ್ಯರು ದೃಢಪಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *