ಚಿಕ್ಕೋಡಿ prajakiran.com : ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್ ಇ ಎಸ್ ಪುಂಡಾಟ ನಡೆಸಿದೆ.
ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ದುಷ್ಕರ್ಮಿಗಳು, ಕನ್ನಡ ಬೋರ್ಡಗಳಿಗೆ ಮಸಿ ಬಳೆದು ಪುಂಡಾಟ ಮೆರದರು.
ಶಿವಾಜಿ ಪ್ರತಿಮೆಗೆ ಅಪಮಾನ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ಇಳಿದ ಎಮ್ ಇ ಎಸ್.
ಮತ್ತು ಶಿವಸೇನೆ ಕಾರ್ಯಕರ್ತರು.
ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಾಂಗ್ಲಿಯಲ್ಲಿ 50% ಗೂ ಅಧಿಕ ಕನ್ನಡಿಗರು ಇದ್ದಾರೆ.
ಅಲ್ಲದೆ, ಕನ್ನಡ ಬೊರ್ಡ ಇರುವ ಅಂಗಡಿಗಳನ್ನು ಬಂದ್ ಮಾಡಿಸಿದರು.
ಕರ್ನಾಟಕದ ಪ್ರತಿಷ್ಠಿತ ವೈದ್ಯರ ಆಸ್ಪತ್ರೆಗಳು, ಆಸ್ಪತ್ರೆಗಳ ಕನ್ನಡ ಫಲಕಗಳಿಗೆ ಮಸಿ ಬಳೆಯುತ್ತ ಜೈ ಮಹಾರಾಷ್ಟ್ರ ಘೊಷಣೆ ಹಾಕಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವ್ಯಕ್ತಿ ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಿದಾಗ ಆತನ ವಾಹನ ಜಖಂ ಗೊಳಿಸಿದ್ದಾರೆ ಎಂದು ಕುಡಚಿ ಪಟ್ಟಣದ ನಿವಾಸಿ ತಮ್ಮ ಅಳಲು ತೊಡಿಕೊಂಡರು.