ಕಲಬುರಗಿ ಪ್ರಜಾಕಿರಣ.ಕಾಮ್ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಯ ಅಕ್ರಮ ಆರೋಪದ ಕಿಂಗ್ ಪಿನ್ ಆರ್.ಡಿ. ಪಾಟೀಲನನ್ನು ಕೊನೆಗೂ ಕಲಬುರಗಿಯ ಅಶೋಕ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಫಜಲ್ ಪುರ ಗಡಿ ಭಾಗದಲ್ಲಿ ಇರುವ ಸೊಲ್ಲಾಪುರದ
ಸಂಬಂಧಿಕರ ಮನೆಯಲ್ಲಿ ಇತ ಅಡಗಿದ್ದ ಎನ್ನಲಾಗಿದೆ.
ಇದಕ್ಕಾಗಿ ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚಿಸಿದ್ದರು.
ಆತನ ವಿರುದ್ದ ಕಲಬುರಗಿ, ಯಾದಗಿರಿ ಸೇರಿದಂತೆ ಹಲವಡೆ ಪ್ರಕರಣ ದಾಖಲಾದ ಬಳಿಕ ಪೊಲೀಸರು ಅವನನ್ನು ಬಂಧಿಸಲು ಮೀನಾಮೇಷ ಎಣಿಸಿದ ಆರೋಪ ಕೇಳಿಬಂದಿತ್ತು.
ಜೊತೆಗೆ ಪಾಟೀಲ್ ಮೂರು ದಿನಗಳ ಹಿಂದೆ ಕಲಬುರಗಿ ನಗರದ ಅಪಾರ್ಟ್ ಮೆಂಟ್ ನಿಂದ ಪರಾರಿಯಾಗಲು ಸಹಕರಿಸಿದ ಆರೋಪ ಕೇಳಿಬಂದಿತ್ತು.
ಜೊತೆಗೆ ಕಂಪೌಂಡ್ ಹಾರಿ ಪರಾರಿಯಾಗುತ್ತಿದ್ದ ಸಿಸಿಟಿವಿಯ ದೃಶ್ಯ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪೊಲೀಸ್ ಇಲಾಖೆ ಮುಜುಗರ ಅನುಭವಿಸಿತ್ತು.
ಇತ 545 ಪಿಎಸ್ ಐ ಅಕ್ರಮ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದ ಬೆನ್ನ ಹಿಂದೆಯೇ ಕೆಇಎ ಪರೀಕ್ಷೆ ಅಕ್ರಮಕ್ಕೆ ಹಲವರಿಗೆ ಬ್ಲೂಟೂತ್ ನೀಡಿದ್ದ ಆರೋಪ ಕೇಳಿಬಂದಿತ್ತು.