ಗಣೇಶ ಹಬ್ಬದ ನಿಮಿತ್ಯ ಧಾರವಾಡದಲ್ಲಿ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ
ಧಾರವಾಡ ಪ್ರಜಾಕಿರಣ.ಕಾಮ್ : ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರು, ಶಶಸ್ತ್ರ ಪಡೆ ಜೊತೆ ಪಥ ಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಇವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಗರದ ಎಮ್ಮಿಕೇರಿ ನಿಂದ ಶುರುವಾಗಿ ಬಾಗಲಕೋಟ್ ಪೆಟ್ರೋಲ್ ಪಂಪ್ ಜನ್ನತ್ ನಗರ್, ಮದರ್ ಮಡ್ಡಿ ಗಾಂಧಿ ಚೌಕ್. ಕಾಮನಕಟ್ಟಿ ಸರ್ಕಲ್. ಕಮಲಾಪುರ್. ಮಾಳಾಪುರ್, ಶಿವಾಜಿ ಸರ್ಕಲ್ ನಲ್ಲಿ ಪೊಲೀಸರ ಪಥ ಸಂಚಲನ ಮುಕ್ತಾಯ ವಾಯಿತು.